Webdunia - Bharat's app for daily news and videos

Install App

ಸಂಜಯ್ ಚತುರ್ವೇದಿಯನ್ನು ನಮ್ಮ ಕಚೇರಿಗೆ ವರ್ಗಾಯಿಸಿ:ಕೇಜ್ರಿವಾಲ್ ಪತ್ರ

Webdunia
ಬುಧವಾರ, 18 ಫೆಬ್ರವರಿ 2015 (10:20 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಯಲ್ಲಿನ ಎರಡನೇ ದಿನ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್  ಅವರಿಗೆ ಪತ್ರ ಬರೆದು ಸಂಜಯ್ ಚತುರ್ವೇದಿಯನ್ನು ತಮ್ಮ ಕಚೇರಿಗೆ ವರ್ಗಾಯಿಸುವಂತೆ ಪತ್ರಬರೆಯುವ ಮೂಲಕ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿದಿದ್ದಾರೆ.

ಚತುರ್ವೇದಿಯನ್ನು ದೆಹಲಿ ಸರ್ಕಾರದ ಭ್ರಷ್ಟಾಚಾರ ದಳದ ಮುಖ್ಯಸ್ಥರನ್ನಾಗಿ ನೇಮಿಸಲು ಕೇಜ್ರಿವಾಲ್  ಬಯಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. . 2004ರ ಆಗಸ್ಟ್‌ನಲ್ಲಿ ಚತುರ್ವೇದಿಯನ್ನು ಏಮ್ಸ್‌ನಲ್ಲಿನ ಭ್ರಷ್ಟಾಚಾರ ನಿಗ್ರಹಕ್ಕೆ ನೇಮಿಸಿದ ಮುಖ್ಯ ಅಧಿಕಾರಿ ಹುದ್ದೆಯಿಂದ ವಿವಾದಾತ್ಮಕವಾಗಿ ವಜಾ ಮಾಡಲಾಗಿತ್ತು.  ಆಸ್ಪತ್ರೆಯಲ್ಲಿ ಅನೇಕ ಹಗರಣಗಳನ್ನು ಚತುರ್ವೇದಿ ಬಯಲು ಮಾಡಿದ್ದರು.

ತೆರಿಗೆದಾರರ ಹಣದಲ್ಲಿ ಅಧಿಕಾರಿಗಳು ಸುದೀರ್ಘ ಪ್ರವಾಸಕ್ಕೆ ತೆರಳಿದ ಬಗ್ಗೆ ತನಿಖೆಗೆ ಅವರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಮುಖ್ಯ ಜಾಗೃತಾಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಚತುರ್ವೇದಿ ದೆಹಲಿ ಸರ್ಕಾರಕ್ಕೆ ದೊಡ್ಡ ಆಸ್ತಿಯಾಗಲಿದ್ದಾರೆ. ಅವರನ್ನು ನಾವು ತೆರೆದ ಹಸ್ತದಿಂದ ಆಹ್ವಾನಿಸುತ್ತೇವೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments