ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೈನಿಕರು ನಡೆಸಿ ಸರ್ಜಿಕಲ್ ಸ್ಟ್ರೈಕ್ಗೆ (ಸೀಮಿತ ದಾಳಿ) ಬೆಚ್ಚಿ ಬಿದ್ದಿರುವ ಉಗ್ರರು ಅಲ್ಲಿಂದ ಪಲಾಯನಗೈದಿದ್ದಾರೆ.
ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿದ್ದ 500 ಕ್ಕೂ ಹೆಚ್ಚು ಉಗ್ರರು ಭಾರತ ಮತ್ತೊಮ್ಮೆ ದಾಳಿ ನಡೆಸಬಹುದೆಂಬ ಭೀತಿಯಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಗೃಹ ಇಲಾಖೆ ವರದಿ ತಿಳಿಸಿದೆ. ಅವರೆಲ್ಲರೂ ಪಾಕಿಸ್ತಾನದ ನಗರಗಳಿಗೆ ಪಲಾಯನಗೈದಿದ್ದಾರೆ. ಅಲ್ಲಿಂದ ಸ್ಥಳಾಂತರವಾಗಲು ಅವರಿಗೆ ಪಾಕ್ ಸೇನೆಯೇ ಸಹಾಯ ಮಾಡಿದೆ ಎಂದು ತಿಳಿದು ಬಂದಿದೆ.
ಪಿಓಕೆಯಿಂದ ಓಡಿರುವ ಉಗ್ರರು ಪಾಕಿಸ್ತಾನದ ಜನಸಂದಣಿ ಇರುವ ನಗರಗಳಲ್ಲಿ ತರಬೇತಿ ಪಡೆಯುವುದನ್ನು ಮುಂದುವರೆಸಲಿದ್ದಾರೆ.
ಕಳೆದ 15 ದಿನಗಳ ಹಿಂದೆ ಉರಿ ಸೇನಾನೆಲೆಯ ಮೇಲೆ ನಡೆದ ಉಗ್ರರಗುರುವಾರ ಮಧ್ಯರಾತ್ರಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿದ್ದ ಭಾರತೀಯ ಸೇನೆ ಉಗ್ರರ 7 ನೆಲೆಗಳನ್ನು ಧ್ವಂಸಗೊಳಿಸಿತ್ತು. ದಾಳಿಯಲ್ಲಿ ಸುಮಾರು 70 ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ