Select Your Language

Notifications

webdunia
webdunia
webdunia
webdunia

ಹಿಂದೂಗಳ ರಕ್ತದಲ್ಲೇ ಸಹನಶೀಲತೆ ಇದೆ: ನಿತಿನ್ ಗಡ್ಕರಿ

ಹಿಂದೂಗಳ ರಕ್ತದಲ್ಲೇ ಸಹನಶೀಲತೆ ಇದೆ: ನಿತಿನ್ ಗಡ್ಕರಿ
ಮಥುರಾ , ಭಾನುವಾರ, 21 ಫೆಬ್ರವರಿ 2016 (12:17 IST)
ದೇಶದಲ್ಲಿ ಕಳೆದ ಕೆಲ ತಿಂಗಳಿಂದ ನಡೆಯುತ್ತಿರುವ ಬಿರುಸಿನ ಅಸಹಿಷ್ಣುತೆ ಚರ್ಚೆಯ ಮಧ್ಯೆ ಬಿಜೆಪಿ ನಾಯಕ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಿಂದೂ ಸಮುದಾಯದವರ ಸಹನೆಶೀಲತೆ ಬಗ್ಗೆ ಮಾತನಾಡಿದ್ದಾರೆ. 
 
ಬೃಂದಾವನದ ವಾತ್ಸಲ್ಯ ಗ್ರಾಮ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಸಚಿವರು, ಸಹಶೀಲತೆ ಹಿಂದೂಗಳ ರಕ್ತದಲ್ಲಿಯೇ ಇದೆ. ಹಿಂದೂಗಳು ಇತರ ಧರ್ಮಗಳನ್ನು ಹೊಸಕಿ ಹಾಕಲು ಎಂದಿಗೂ ಯತ್ನಿಸಿಲ್ಲ ಎಂದು ಹೇಳಿದ್ದಾರೆ.
 
ಕೆಲವರು ಹಿಂದೂ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಸಮಾಜದ ಇತರ ಸಮುದಾಯದೊಂದಿಗೆ ಸಹನೆ ಮತ್ತು ಸಹಕಾರದೊಂದಿಗೆ ಇರುವುದನ್ನು ಹಿಂದೂಗಳಿಗೆ ಹೇಳಿಕೊಡಬೇಕಿಲ್ಲ. ಅದು ಅವರ ರಕ್ತದಲ್ಲಿಯೇ ಬೆರೆತಿದೆ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದ್ದಾರೆ.  
 
ತೀವ್ರವಾದಿಗಳ ನಡೆಯನ್ನು ಖಂಡಿಸಿದ ಅವರು ಮೂಲಭೂತವಾದಿಗಳು ಮತ್ತು ಭಯೋತ್ಪಾದಕರು ಬದುಕಿ ಮತ್ತು ಬದುಕಲು ಬಿಡಿ ಎಂದು ಸಾರುವ ನಮ್ಮ ಮೂಲ ಸಂಸ್ಕೃತಿಯನ್ನು ತೊಡೆದು ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

Share this Story:

Follow Webdunia kannada