Webdunia - Bharat's app for daily news and videos

Install App

ಯುವತಿಯರು ಲವ್‌ ಜಿಹಾದ್‌ ವ್ಯಾಮೋಹಕ್ಕೆ ಬಲಿಯಾಗದಿರಲು ಮೊಬೈಲ್ ಬಳಕೆಗೆ ನಿಷೇಧ

Webdunia
ಮಂಗಳವಾರ, 2 ಸೆಪ್ಟಂಬರ್ 2014 (14:48 IST)
ಲವ್ ಜಿಹಾದ್‌ಗೆ ಶಾಲಾ ಬಾಲಕಿಯರು ಆಕರ್ಷಿತವಾಗದಿರಲು ಬಾಲಕಿಯರ ಮೊಬೈಲ್ ಬಳಕೆಗೆ ಉತ್ತರಪ್ರದೇಶದ ಖಾಪ್ ಪಂಚಾಯಿತಿಯೊಂದು ಆದೇಶ ಹೊರಡಿಸಿದೆ.  
 
ಅಖಿಲ ಭಾರತೀಯ ವೈಶ್ಯ ಎಕತಾ ಪರಿಷತ್ ಬಾಲಕಿಯರ ಮೊಬೈಲ್ ಬಳಕೆಗೆ ನಿಷೇಧ ಹೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 
 
ಶಾಲೆಗೆ ಹೋಗುವ ಬಾಲಕಿಯರು ಮತ್ತು ಹದಿ ಹರೆಯದ ಯುವಕರು ಮೊಬೈಲ್ ಬಳಸದಂತೆ ನಿಷೇಧ ಹೇರಲಾಗಿದೆ. ಆಗ್ರಾದಲ್ಲಿ ನಿಷೇಧ ಜಾರಿಗೆ ತರಲಾಗಿದ್ದು, ನಂತರ ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
ಆಸಕ್ತಿಕರ ವಿಷಯವೆಂದರೆ, ಕೇಂದ್ರ ಸಚಿವ ಕಲ್ರಾಜ್ ಮಿಶ್ರಾ ಅವರ ಉಪಸ್ಥಿತಿಯಲ್ಲಿಯೇ ಶಾಲಾ ಬಾಲಕಿಯರು ಮತ್ತು ಯುವಕರು ಮೊಬೈಲ್ ಬಳಸದಂತೆ ನಿಷೇಧ ಹೇರಿಕೆಗೆ ಪಂಚಾಯಿತಿ ಆದೇಶ ನೀಡಿದೆ. 
 
ಅಖಿಲ್ ಭಾರತೀಯ ವೈಶ್ಯ ಎಕತಾ ಪರಿಷತ್ ಅಧ್ಯಕ್ಷ ಸುಮಂತ್ ಗುಪ್ತಾ ಮಾತನಾಡಿ, ಅಖಿಲೇಶ್ ಯಾದವ್ ಸರಕಾರ ಒಂದು ಸಮುದಾಯವನ್ನು ಓಲೈಸಿ ಮತ್ತೊಂದು ಸಮುದಾಯವನ್ನು ಕೀಳಾಗಿ ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
 
ಲವ್ ಜಿಹಾದ್ ವ್ಯಾಮೋಹಕ್ಕೆ ಒಳಗಾಗದಿರಲು ಯುವಕ, ಯುವತಿಯರಿಗೆ ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಗೆ ನಿಷೇಧ ಹೇರಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸುಮಂತ್ ಗುಪ್ತಾ ತಿಳಿಸಿದ್ದಾರೆ. 
 
 
 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments