Webdunia - Bharat's app for daily news and videos

Install App

ತಿರುಪತಿ ತಿಮ್ಮಪ್ಪನಿಗೂ ನೋಟ್ ಬ್ಯಾನ್ ಬಿಸಿ ಮುಟ್ಟಿಸಿದ ಭಕ್ತರು

Webdunia
ಶುಕ್ರವಾರ, 3 ಮಾರ್ಚ್ 2017 (13:53 IST)
ತಿರುಪತಿ ತಿಮ್ಮಪ್ಪ ಜನರು ಕೊಟ್ಟ ಕಾಣಿಕೆಯಿಂದಲೇ ಸಂದ್ಧಿಗ್ದತೆಗೆ ಸಿಲುಕಿದ್ದಾನೆ. ಕಳೆದೆರಡು ತಿಂಗಳಿಂದ ತಿರುಪತಿ ತಿಮ್ಮಪ್ಪನ ಹುಂಡಿಗೆ ಅಮಾನ್ಯಗೊಂಡಿರುವ 500 ಮತ್ತು 1000 ರೂ. ಮುಖಬೆಲೆಯ 4 ಕೋಟಿ ರೂಪಾಯಿಯಷ್ಟು ಹಳೇ ನೋಟುಗಳು ಬಿದ್ದಿವೆ.  
 

ಹಳೇನೋಟು ಬದಲಾವಣೆಯ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.

ಹಳೇನೋಟು ಬದಲಾವಣೆಗಿದ್ದ ಡಿಸೆಂಬರ್ 30ರ ಡೆಡ್ ಲೈನ್ ಮುಗಿದ ಬಳಿಕವೂ ನೂರಾರು ಭಕ್ತರು ಹುಂಡಿಗೆ ಹೊಸ ನೋಟುಗಳ ಜೊತೆ ಹಳೆಯ ನೋಟುಗಳನ್ನೂ ಹಾಕಿದ್ದಾರೆ. ಈ ಮೊತ್ತವೇ 4 ಕೋಟಿ ರೂಪಾಯಿ ಮೀರಿದೆ. ಡೆಡ್ ಲೈನ್ ಮುಗಿದ ಹಿನ್ನೆಲೆಯಲ್ಲಿ ಮನೆಯಲ್ಲಿಟ್ಟುಕೊಂಡಿದ್ದ ಹಳೆಯ ನೊಟುಗಳನ್ನ ಏನು ಮಾಡಬೇಕೆಂದು ತಿಳಿಯದೆ ಹುಂಡಿಗೆ ಹಾಕಿರಬಹುದೆಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದ ನಿಯಮಾವಳಿ ಪ್ರಕಾರ ಡೆಡ್ ಲೈನ್ ಮುಗಿದ ಬಳಿಕ 10ಕ್ಕೂ ಹೆಚ್ಚು ಹಳೆಯ ನೋಟುಗಳನ್ನ ಹೊಂದಿರುವವರಿಗೆ 10 ಸಾವಿರದಷ್ಟು ದಂಡ ವಿಧಿಸಲಾಗುತ್ತೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments