ಪ್ರಧಾನಿ ನರೇಂದ್ರ ಮೋದಿ ಕೋ ಮಾರ್ ದೋ ಎನ್ನುವ ಎಸ್ಎಂಎಸ್ ಕರೆ ಬಂದಿರುವ ಹಿನ್ನೆಲೆಯಲ್ಲಿ ಜಾರ್ಖಂಡ್ ಪೊಲೀಸರು ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬನ ಮೊಬೈಲ್ನಿಂದ ಪ್ರದಾನಿ ನರೇಂದ್ರ ಮೋದಿಯವರಿಗೆ ಬಂದ ಜೀವ ಬೆದರಿಕೆ ಕರೆಯ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವ ವಿಶ್ವಾಸವಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿಯ ನಿವಾಸಿಯಾದ ಅಮರೇಶ್ ಕುಮಾರ್ ಎನ್ನುವವರಿಗೆ ಮೋದಿ ಕೋ ಮಾರ್ ದೋ ಎನ್ನುವ ಮೊಬೈಲ್ ಸಂದೇಶ ಬಂದಿರುವುದನ್ನು ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಧಾನಮಂತ್ರಿ ಮೋದಿ ಪಲಮಾವು ಜಿಲ್ಲೆಯ ದಲ್ತೋನ್ಗಂಜ್ ಮತ್ತು ಲಾಟೇಹಾರ್ನ ಚಾಂದವಾ ನಗರಗಳಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೋದಿಯವರಿಗೆ ಬಂದ ಕರೆ ಹುಸಿಯಾಗಿರಬಹುದು. ಆದರೆ, ಪ್ರದಾನಿಯವರ ಸಂಪೂರ್ಣ ರಕ್ಷಣೆಯ ಹೊಣೆ ನಮ್ಮ ಜವಾಬ್ದಾರಿಯಾಗಿದೆ ಎಂದು ಜಾರ್ಖಂಡ್ ಪೊಲೀಸ್ ಮಹಾನಿರ್ದೆಶಕ ರಾಜೀವ್ ಕುಮಾರ್ ತಿಳಿಸಿದ್ದಾರೆ.