ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಗುರುಪೂರ್ಣಿಮಾ ಉತ್ಸವದ ದಿನದಂದು ಒಟ್ಟು ನಗದು 3.8 ಕೋಟಿ ರೂಪಾಯಿಗಳು , ಚಿನ್ನಾಭರಣ. ವಿದೇಶಿ ಕರೆನ್ಸಿ ಸಂಗ್ರಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
3.8 ಕೋಟಿ ರೂಪಾಯಿ ನಗದು ಹಣ ಹೊರತುಪಡಿಸಿ, 312 ಗ್ರಾಂ ಚಿನ್ನಾಭರಣ, ನಾಲ್ಕು ಕೆಜಿ ಬೆಳ್ಳಿಯ ವಸ್ತುಗಳು ಮತ್ತು 50 ವಿದೇಶಗಳಿಗೆ ಸೇರಿದ ಕರೆನ್ಸಿಗಳನ್ನು ಭಕ್ತಾದಿಗಳು ದೇಣಿಗೆಯಾಗಿ ನೀಡಿದ್ದಾರೆ ಎಂದು ಸಂಸ್ಥಾನದ ಮುಖ್ಯ ಅಕೌಂಟೆಂಟ್ ದಿಲೀಪ್ ಜಿರ್ಕೆ ತಿಳಿಸಿದ್ದಾರೆ.
ದೇವಾಲಯದ ಹುಂಡಿಗಳಲ್ಲಿರುವ ಹಣದ ಪೆಟ್ಟಿಗೆಗಳಲ್ಲಿ 2.25 ಕೋಟಿ ರೂ.ಸಂಗ್ರಹವಾಗಿದ್ದು, 75 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಲಾಗಿದೆ. 8.54 ಕೋಟಿ ರೂಪಾಯಿಗಳು ಆನ್ಲೈನ್ ಮೂಲಕ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗುರುಪೂರ್ಣಿಮಾ ಉತ್ಸವದ ದಿನದಂದು 2.27 ಲಕ್ಷ ಭಕ್ತರಿಗೆ ಲಾಡು ವಿತರಿಸಲಾಗಿದ್ದು. 1.97 ಲಕ್ಷ ಭಕ್ತರಿಗೆ ಉಚಿತ ಊಟ ನೀಡಲಾಗಿದೆ ಎಂದು ಸಂಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಜಾಧವ್ ತಿಳಿಸಿದ್ದಾರೆ.