Webdunia - Bharat's app for daily news and videos

Install App

ಮೊದಲ ರಾತ್ರಿಯಲ್ಲೇ ವರದಕ್ಷಿಣೆ ಕಾಟ; ಫೋನ್ ಮೂಲಕ್ ತಲಾಕ್ ನೀಡಿದ ನವವಧು

Webdunia
ಗುರುವಾರ, 28 ಜುಲೈ 2016 (08:37 IST)
ಮೂರು ಬಾರಿ ತಲಾಕ್ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಹಕ್ಕು ಮುಸ್ಲಿಂ ಧರ್ಮಾನುಯಾಯಿಗಳಿಗಿದೆ. ಇದರ ದುರುಪಯೋಗ ಪಡಿಸಿಕೊಂಡು ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ವಿಚ್ಛೇದನ ನೀಡಿದ ಸಾಕಷ್ಟು ನಿದರ್ಶನಗಳನ್ನು ಕಂಡಿರುತ್ತೇವೆ. ಫೋನ್ ಸಂದೇಶದ ಮೂಲಕ ತಲಾಕ್ ಕಳುಹಿಸಿದ ಉದಾಹರಣೆಗಳು ಇವೆ. ಇದೆಲ್ಲ ಪುರುಷರದಾಯಿತು.  ಇಲ್ಲೊಂದು ವಿಭಿನ್ನ ನಿದರ್ಶನವಿದೆ. ಇಲ್ಲೊಂದು ಯುವತಿ ವರದಕ್ಷಿಣೆ ವಿರುದ್ಧ ಸಿಡಿದೆದ್ದಿದ್ದು  ಮದುವೆಯಾದ ಮಾರನೇ ದಿನವೇ ಫೋನ್ ಮೂಲಕ ಪತಿಗೆ ತಲಾಕ್ ನೀಡಿ ದಿಟ್ಟತನ ತೋರಿಸಿದ್ದಾಳೆ.

ಉತ್ತರಪ್ರದೇಶದ ಭಗವಾನ್ ಪುರ್ ಮೂಲದ ಮೊಹಸೀನಾ ಎಂಬ 19 ವರ್ಷದ ಯುವತಿ ಮೊಹಮ್ಮದ್ ಆರೀಫ್ ಎಂಬಾತನನ್ನು ವಿವಾಹವಾಗಿದ್ದಳು. ಮಧುರಮಯವಾಗಬೇಕಿದ್ದ ಮೊದಲ ರಾತ್ರಿ ಆಕೆಯ ಪಾಲಿಗೆ ಕರಾಳವಾಗಿತ್ತು. ಅಂದೇ ಪತಿ ಆಕೆಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾನೆ. ತಕ್ಷಣ ತಾಯಿ ಅನ್ವಾರಿ ಬೇಗಂಗೆ ಕರೆ ಮಾಡಿದ ಮೊಹಸೀನಾ ನಡೆದ ವಿಷಯವನ್ನು ತಿಳಿಸಿದ್ದಾಳೆ. ಆಕೆಗೆ ಧೈರ್ಯ ಹೇಳಿದ ತಾಯಿ ತಕ್ಷಣ ಮನೆಗೆ ಹಿಂತಿರುಗುವಂತೆ ಹೇಳಿದ್ದಾಳೆ. ಅಂತೆಯೇ ಮೊಹಸೀನಾ ತನ್ನ ಪತಿಯ ಗ್ರಾಮದ ಕೆಲವು ಜನರ ಜೊತೆಗೂಡಿ 10 ಕೀಲೋಮೀಟರ್ ದೂರದ ತನ್ನ ತವರಿಗೆ ಹಿಂತಿರುಗಿದ್ದಾಳೆ.

ಮರುದಿನ ಫೋನ್ ಮೂಲಕ ಪತಿಗೆ ತಲಾಕ್ ನೀಡಿದ್ದಾರೆ. ಇಬ್ಬರನ್ನು ಸೇರಿಸಲು ಖಾಪ್ ಪಂಚಾಯತ್ ಸಾಕಷ್ಟು ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಮೊಹಸಿನಾ ತನ್ನ ನಿರ್ಧಾರವನ್ನು ಬದಲಿಸಲಿಲ್ಲ.

ಆರೀಫ್ ಕುಟುಂಬದವರದು ತಪ್ಪೆಂದು ತೀರ್ಪು ನೀಡಿದ ಖಾಪ್ ಪಂಚಾಯತ್ ಮದುವೆಗೆ ವಧುವಿನ ಕಡೆಯವರು ಖರ್ಚು ಮಾಡಿದ್ದ 2 ಲಕ್ಷ ರೂಪಾಯಿಯನ್ನು ನೀಡುವಂತೆ ವರನ ಕಡೆಯವರಿಗೆ  ಮತ್ತು ಮುಂದೆ 3 ವರ್ಷಗಳ ಕಾಲ ಆರೀಫ್ ಕುಟುಂಬದಲ್ಲಿ ಯಾವುದೇ ಮದುವೆ ಕಾರ್ಯ ನಡೆಸಬಾರದು ಎಂದು ಆದೇಶಿಸಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಪ್ರಾಣ ಉಳಿಸಿಕೊಳ್ಳಲು ಬಿಲ್ಡಿಂಗ್‌ನಿಂದ ವಿದ್ಯಾರ್ಥಿಗಳು ಹಾರುತ್ತಿರುವ ಭೀಕರ ವಿಡಿಯೋ ವೈರಲ್‌

ಶೀಘ್ರದಲ್ಲೇ ನಿವೃತ್ತಿ ಪಡೆಯುವುದಾಗಿ ಹೇಳಿದ್ದ: ಕ್ಯಾಪ್ಟನ್ ಸುಮೀತ್‌ ಸಬರ್ವಾಲ್‌ಗೆ ತಂದೆಯ ಕಣ್ಣೀರ ಅಂತಿಮ ವಿದಾಯ

ರಾತೋರಾತ್ರಿ ಹಿಂದೂ ಕಾರ್ಯಕರ್ತರ ಮನೆಗೆ ಪೊಲೀಸರ ಭೇಟಿ: ತನಿಖೆಗೆ ಆದೇಶ

ಬಾಂಬ್‌ ಬೆದರಿಕೆ: ನಾಗ್ಪುರ ಏರ್‌ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

ಲಂಡನ್ ಬೆನ್ನಲ್ಲೇ ಪ್ಯಾರಿಸ್‌ಗೆ ನಿಗದಿಯಾಗಿದ್ದ ಏರ್‌ ಇಂಡಿಯಾ ವಿಮಾನ ರದ್ದು

ಮುಂದಿನ ಸುದ್ದಿ
Show comments