Webdunia - Bharat's app for daily news and videos

Install App

ಹುಡುಗಿಯ ವಿಚಾರಕ್ಕೆ ಇಂತಹ ದುಸ್ಥಿತಿ ತಂದುಕೊಂಡ್ರಾ ಈ ಹುಡುಗರು

Webdunia
ಮಂಗಳವಾರ, 2 ಅಕ್ಟೋಬರ್ 2018 (10:59 IST)
ಹೈದರಾಬಾದ್ : ಹುಡುಗಿಯೊಬ್ಬಳ  ವಿಚಾರವಾಗಿ 10ನೇ ತರಗತಿಯ ಹುಡುಗರಿಬ್ಬರ ನಡುವೆ ಜಗಳವಾಗಿ ಪರಸ್ಪರ ಬೆಂಕಿ ಹಚ್ಚಿಕೊಂಡ ಘಟನೆ ತೆಲಂಗಾಣದ ಜಗ್ತಿಯಾಲ್  ನಗರದಲ್ಲಿ ನಡೆದಿದೆ.


ಈ ಇಬ್ಬರ ಹೆಸರು ಕೆ. ಮಹೇಂದರ್ ಹಾಗೂ ರವಿ ತೇಜಾ ಎಂಬುದಾಗಿ ತಿಳಿದುಬಂದಿದ್ದು,ಇವರು  ಮಿಷನರಿ ಸ್ಕೂಲ್​ನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. ಇವರಿಬ್ಬರು ಅದೇ ಶಾಲೆಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದರಂತೆ.


ಭಾನುವಾರ ರಾತ್ರಿ ವೇಳೆ ಕೆ. ಮಹೇಂದರ್ ಹಾಗೂ ರವಿ ತೇಜಾ ಇಬ್ಬರೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆ ವೇಳೆ ಈ ಹುಡುಗಿಯ ವಿಚಾರ ಪ್ರಸ್ತಾಪವಾಗಿ ಇಬ್ಬರು ಜಗಳವಾಡಿ ಪೆಟ್ರೋಲ್ ಸುರಿದು ಪರಸ್ಪರ ಬೆಂಕಿ ಹಚ್ಚಿಕೊಂಡಿದ್ದಾರೆ.


ಈ ಸಂದರ್ಭದಲ್ಲಿ ಅವರಿಬ್ಬರ ಜೊತೆ ಮೂರನೇ ಗೆಳೆಯ ಸಹ ಇದ್ದನೆಂದು ತಿಳಿದ ಪೊಲೀಸರು ಆತನನ್ನು ವಿಚಾರಣೆಗೊಳಪಡಿಸಿದಾಗ  ಈ ವಿಚಾರ ತಿಳಿದುಬಂದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೆ ಸಾವನಪ್ಪಿದ್ದು, ಇನ್ನೊಬ್ಬ ನ ಸ್ಥಿತಿ ಚಿಂತಾಜನಕವಾಗಿದೆ.


ಸದ್ಯ ಎಲ್ಲ ಹೇಳಿಕೆಯನ್ನೂ ದಾಖಲಿಸಿಕೊಂಡಿರುವ ಪೊಲೀಸರು ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದನ್ನು ತನಿಖೆ ಮಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments