Webdunia - Bharat's app for daily news and videos

Install App

ಮಗಳ ಅತ್ಯಾಚಾರ ಮಾಡಿದ ಆರೋಪಿಗಳಿಂದ ಹಣ ತೆಗೆದುಕೊಂಡ ತಾಯಿಯನ್ನು ಬಂಧಿಸಿದ ಪೊಲೀಸರು

Webdunia
ಸೋಮವಾರ, 7 ಜನವರಿ 2019 (07:50 IST)
ಹರಿಯಾಣ : ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಗಳಿಂದ ಹಣ ತೆಗೆದುಕೊಂಡ ಕಾರಣಕ್ಕೆ ಮಹಿಳೆಯನ್ನು ಹಾಗೂ ಇಬ್ಬರು ಆರೋಪಿಗಳನ್ನು  ಹರಿಯಾಣ ಪೊಲೀಸರು ಬಂಧಿಸಿದ್ದಾರೆ.


ಅನಿತಾ(45) ಇಂತಹ ನೀಚ ಕೆಲಸ ಮಾಡಿದ ಮಹಾತಾಯಿ. ಅಜಯ್ ಹಾಗೂ ದಿಲ್ಬಾಗ್ ಸಿಂಗ್ ಬಂಧಿತ ಆರೋಪಿಗಳು. ಅನಿತಾ ತನ್ನ 15 ವರ್ಷದ ಮಗಳನ್ನು ಕರೆದುಕೊಂಡು ಮದುವೆ ಸಮಾರಂಭದಲ್ಲಿ ಫಾಲ್ಗೊಳ್ಳಲು ತೆರಳಿದಾಗ  ಅಲ್ಲಿ ಅಜಯ್ ಎಂಬಾತನನ್ನು ಭೇಟಿ ಮಾಡಿದ್ದಾಳೆ. ಮೂರು ವರ್ಷಗಳಿಂದ ಪರಿಚಯನಾಗಿದ್ದ ಅಜಯ್ ಜೊತೆಗೆ ತನ್ನ ಮಗಳನ್ನು ಕಳುಹಿಸಿದ್ದಾಳೆ.  ಆದರೆ ಅಜಯ್ ತನ್ನ ಮನೆಯಲ್ಲಿ ಮೂವರು ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಮರುದಿನ ಅಜಯ್ ಸಂತ್ರಸ್ತೆಯ ಮನೆಗೆ ಬಂದು ತಾಯಿಗೆ 1000 ರೂ ನೀಡಿದ್ದಾನೆ.  ಅಲ್ಲದೇ ಒಮ್ಮೆ ಚಾಲಕ ದಿಲ್ಬಾಗ್ ಸಿಂಗ್ ಎಂಬಾತನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.


ಈ ವಿಚಾರವನ್ನು ಬಾಲಕಿ ತನ್ನ ಚಿಕ್ಕಮ್ಮ ಬಳಿ ತಿಳಿಸಿದಾಗ ಆಕೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ್ದಾಳೆ. ಆಗ ಬಾಲಕಿ 7 ತಿಂಗಳ ಗರ್ಭೀಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ನಂತರ ಬಾಲಕಿ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಮತ್ತು ಮಕ್ಕಳ ರಕ್ಷಣೆ ಲೈಂಗಿಕ ದೌರ್ಜನ್ಯ (ಪಿಓಸಿಎಸ್ಒ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಬಾಲಕಿ ತಾಯಿ, ಅತ್ಯಾಚಾರ ಆರೋಪಿ ಅಜಯ್, ದಿಲ್ಬಾಗ್ ಸಿಂಗ್ ನನ್ನು ಬಂಧಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮಂಗಳೂರಿನಲ್ಲಿ ಸುರಿದ ಮಳೆಗೆ ಅವಾಂತರ: ರಸ್ತೆ ಮೇಲೆ ಪ್ರವಾಹದಂತೆ ಹರಿದ ಮಳೆ ನೀರು, Video Viral

Karnataka Rains: ಈ ಆರು ಜಿಲ್ಲೆಗಳಿಗೆ ನಾಳೆಯೂ ಹವಾಮಾನ ಎಚ್ಚರಿಕೆ ಗಮನಿಸಿ

ಮುಂದಿನ ಸುದ್ದಿ