Webdunia - Bharat's app for daily news and videos

Install App

ಲೈಂಗಿಕ ಸುಖ ನೀಡುತ್ತಿಲ್ಲ ಎಂದ ಮಹಿಳೆಯ ಹತ್ಯೆಗೈದ ಪ್ರಿಯಕರ

Webdunia
ಗುರುವಾರ, 28 ಮಾರ್ಚ್ 2019 (18:44 IST)
ಹಲವು ವರ್ಷಗಳ ಕಾಲ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಬಂಧ ಹೊಂದಿದ್ದ ಪ್ರಿಯಕರ, ಇದೀಗ ಆಕೆ ಲೈಂಗಿಕ ಸುಖ ಕೊಡುತ್ತಿಲ್ಲ, ಮಾತನಾಡುತ್ತಿಲ್ಲ ಎನ್ನುವ ಕೋಪದ ಭರದಲ್ಲಿ ಆಕೆಯನ್ನು ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ರಂಗಾರೆಡ್ಡಿ ಜಿಲ್ಲೆಯ ಫಾರೂಕ್‌ನಗರ್ ತಾಲೂಕಿನ ಎಲಿಕಟ್ಟ ಗ್ರಾಮದ ನಿವಾಸಿಯಾದ ಜಂಗಂ ರಾಮಲುಗೆ ಅದೇ ಉರಿನವಳಾದ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತು. ಹಲವು ತಿಂಗಳುಗಳು ಕಾಲ ನಿರಂತರ ದೈಹಿಕ ದಾಹವನ್ನು ತೀರಿಸಿಕೊಂಡಿದ್ದಾರೆ. ಯಾವುದೇ ವಿಷಯಕ್ಕೆ ಪರಸ್ಪರ ಭಿನ್ನಾಭಿಪ್ರಾಯ ಎದುರಾಗಿದ್ದರಿಂದ ಇಬ್ಬರು ಕೆಲ ಕಾಲ ಬೇರೆ ಬೇರೆಯಾಗಿದ್ದರು.
 
ಕೆಲವು ದಿನಗಳಲ್ಲಿ ಸರಿಹೋಗಬಹುದು ಎಂದು ಕಾಯುತ್ತಿದ್ದ ರಾಮುಲುಗೆ ಆಕೆ ಮಾತನಾಡದಿರುವುದು, ಲೈಂಗಿಕ ಸುಖ ಕೊಡದಿರುವುದರಿಂದ ಕೋಪ ನೆತ್ತಿಗೇರಿದೆ. ಹೇಗಾದರು ಮಾಡಿ ಅವಳಿಗೆ ತಕ್ಕ ಪಾಠ ಕಲಿಸಬೇಕು ಎಂದು ತೀರ್ಮಾನಿಸಿದ್ದಾನೆ. ಕೂಲಿ ಕೆಲಸ ಮುಗಿಸಿ ಸಂಜೆ ಹೊತ್ತಿನಲ್ಲಿ ಒಂಟಿಯಾಗಿ ಮನೆಗೆ ಮರಳುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
 
ಮಹಿಳೆ ಬೆಂಕಿ ತಗಲುತ್ತಿದ್ದಂತೆ ಅದರ ಬಿಸಿ ತಾಳದೆ ಜೋರಾಗಿ ಕೂಗಿಕೊಂಡಿದ್ದಾಳೆ. ನೆರೆಹೊರೆಯವರು ಧಾವಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಸಾವಿನ ಮುಂಚೆ ತನ್ನ ಪ್ರಿಯಕರ ಮಾಡಿದ ಘನಕಾರ್ಯವನ್ನು ಪೊಲೀಸರಿಗೆ ತಿಳಿಸಿದ್ದಾಳೆ.
 
ಪೊಲೀಸರು ಪರಾರಿಯಾಗಿರುವ ಆರೋಪಿ ರಾಮುಲು ವಿರುದ್ಧ ಹುಡುಕಾಟ ಆರಂಭಿಸಿದ್ದು,ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ