Webdunia - Bharat's app for daily news and videos

Install App

ಶೌಚಾಲಯಕ್ಕೆ ಹೋಗಿದ್ದ ಪತ್ನಿಯನ್ನು ಮರೆತ ಪತಿ !

Webdunia
ಗುರುವಾರ, 29 ಡಿಸೆಂಬರ್ 2022 (13:03 IST)
ಬ್ಯಾಂಕಾಕ್ : ವ್ಯಕ್ತಿಯೊಬ್ಬ ಶೌಚಾಲಯಕ್ಕೆ ಹೋಗಿದ್ದ ತನ್ನ ಪತ್ನಿಯನ್ನು ಮರೆತು ಪ್ರವಾಸವನ್ನು ಮುಂದುವರಿಸಿದ ವಿಚಿತ್ರ ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ.

ಬೂಂಟೊಮ್ ಚೈಮೂನ್ (55) ಮತ್ತು ಆತನ ಪತ್ನಿ ಅಮ್ನುವೇ ಚೈಮೂನ್ (49) ರಜೆಯ ಮಜಾ ಕಳೆಯಲು ರೋಡ್ ಟ್ರಿಪ್ ಕೈಗೊಂಡಿದ್ದರು. ಟ್ರಿಪ್ ಸಮಯದಲ್ಲಿ ಶೌಚಾಲಯಕ್ಕೆಂದು ಬೆಳಗಿನ ಜಾವ 2 ಗಂಟೆಗೆ ತಮ್ಮ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

ಆದರೆ ಅಲ್ಲಿ ಸುತ್ತಲೂ ಕಾಡುಗಳಿದ್ದರಿಂದ ಕಾರಿನಿಂದ ಇಳಿದು ಶೌಚಕ್ಕೆಂದು ಮಹಿಳೆ ಹತ್ತಿರದ ಕಾಡಿನೊಳಗೆ ಹೋಗಿದ್ದಾಳೆ. ಆದರೆ ಇತ್ತ ಆಕೆಯ ಪತಿ ಬೂಂಟೊಮ್ ತನ್ನ ಪತ್ನಿ ಅಮ್ನುವೇ ಚೈಮೂನ್ ವಾಹನದಿಂದ ಇಳಿದಿರುವುದನ್ನು ಗಮನಿಸಿರಲಿಲ್ಲ. ಇದರಿಂದಾಗಿ ಆತ ತನ್ನ ಪ್ರವಾಸವನ್ನು ಮುಂದುವರಿಸಿದ್ದಾನೆ.

ಇತ್ತ ಅಮ್ನುವೇ ಚೈಮೂನ್ ಕಾಡಿನಿಂದ ಹಿಂದಿರುಗಿ ಬಂದಿದ್ದಾಳೆ. ಆದರೆ ಆ ವೇಳೆ ಕಾರಾಗಲೀ, ಗಂಡನಾಗಲೀ ಕಾಣಿಸಲಿಲ್ಲ. ಇದರಿಂದಾಗಿ ಆಕೆ ತನ್ನನ್ನು ಬಿಟ್ಟು ಹೋಗಿದ್ದಾನೆ ಎಂದು ಬಹುಬೇಗನೇ ಅರಿತುಕೊಂಡಿದ್ದಾಳೆ.

ಈ ವಿಷಯವನ್ನು ತನ್ನ ಪತಿಗೆ ತಿಳಿಸಬೇಕು ಎಂದುಕೊಂಡರೂ ಆಕೆ ಬಳಿ ಮೊಬೈಲ್ ಇರಲಿಲ್ಲ ಬದಲಿಗೆ ಕಾರಿನಲ್ಲೇ ಇರುವುದನ್ನು ನೆನಪಿಸಿಕೊಂಡಿದ್ದಾಳೆ. ಇತ್ತ ತುಂಬಾ ಕತ್ತಲಾಗಿದ್ದರಿಂದ ಭಯಭೀತಳಾಗಿದ್ದಳು.

ಆದರೂ ಆಕೆ ಸುಮಾರು 20 ಕಿ.ಮೀ ಸಂಚರಿಸಿ ಕಬಿನ್ ಬುರಿ ಜಿಲ್ಲೆಯನ್ನು ತಲುಪಿದ್ದಾಳೆ. ಅಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದು, ತನ್ನ ಪತಿಗೆ ಈ ವಿಷಯವನ್ನು ತಿಳಿಸಲು ಕೇಳಿಕೊಂಡಿದ್ದಾಳೆ. ಆದರೆ ಆಕೆಗೆ ಪತಿಯ ನಂಬರ್ ನೆನಪಿಲ್ಲದ ಕಾರಣ 20 ಬಾರಿ ತನ್ನ ನಂಬರ್ಗೆ ಕರೆ ಮಾಡಿದ್ದಾಳೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments