Webdunia - Bharat's app for daily news and videos

Install App

ವೇಲೂರಿನಲ್ಲಿ ನಡೀತು ಸಿನೀಮೀಯ ರೀತಿ ಮದುವೆ: ತಾಳಿಕಟ್ಟುತ್ತಿದ್ದ ಅಣ್ಣನನ್ನು ತಳ್ಳಿ ವಧುವಿಗೆ ತಾಳಿಕಟ್ಟಿದ ತಮ್ಮ

Webdunia
ಶುಕ್ರವಾರ, 2 ಜೂನ್ 2017 (15:29 IST)
ವೇಲೂರು:ವರ ಇನ್ನೇನು ವಧುವಿಗೆ ತಾಳಿಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಮನೆಗೆ ಬಂದ ವರನ ತಮ್ಮ, ಅಣ್ಣನನ್ನು ಪಕ್ಕಕ್ಕೆ ದೂಡಿ ವಧುವಿಗೆ ತಾಳಿಕಟ್ಟಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
 
ವೇಲೂರು ಜಿಲ್ಲೆಯ ತಿರುಪತ್ತೂರಿನ ಕಾಮರಾಜ್‌ ಎಂಬುವವರಿಗೆ ಮೂವರು ಗಂಡು ಮಕ್ಕಳು. ಆರು ತಿಂಗಳ ಹಿಂದೆ ಎರಡನೇ ಮಗ ರಾಜೇಶ್‌ಗೆ ಮಧುರೈನ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ನಿನ್ನೆ ವೆನಕಲ್‌ನ ಮುರುಗನ್ ದೇಗುಲದಲ್ಲಿ ಮದುವೆಗೆ ವೇದಿಕೆಗೆ ಸಿದ್ಧವಾಗಿತ್ತು. ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಛರಿಸುತ್ತಿದ್ದರು. ವರ ರಾಜೇಶ್‌ ಕೈಗೆ ಮಂಗಳಸೂತ್ರ ನೀಡಿ ವಧುವಿಗೆ ತಾಳಿ ಕಟ್ಟುವಂತೆ ಸೂಚಿಸುತ್ತಿದ್ದರು. 
 
ಆಗ ಮಧುವೆಯ ಸ್ಥಳಕ್ಕೆ ಬಂದ ಮೂರನೇ ಮಗ ವಿನೋದ್ ಅಣ್ಣ ರಾಜೇಶ್‌ನ ಕೈಯಲ್ಲಿದ್ದ ತಾಳಿಯನ್ನು ಸಿನಿಮೀಯರೀತಿಯಲ್ಲಿ ಕಿತ್ತುಕೊಂಡು ಆತನನ್ನು ಪಕ್ಕಕ್ಕೆ ದೂಡಿ ವಧುವಿಗೆ ತಾಳಿ ಕಟ್ಟಿದ್ದಾನೆ. ಮದುವೆಗೆ ಸೇರಿದ್ದ ಜನರೆಲ್ಲರೂ ಅಚ್ಚರಿಗೊಳಗಗೈ ನೋಡುತ್ತಾ ನಿಂತಿದ್ದಾರೆ. ತಂದೆ-ತಾಯಿ ವಿನೋದ್ ನ ಕೃತ್ಯಕ್ಕೆ ಕೋಪೋದ್ರಕ್ತರಾಗಿದ್ದಾರೆ. 
 
ಈ ವೇಳೆ ವಿನೋದ್‌ ತಾನು ಅಣ್ಣ ರಾಜೇಶ್‌ ಮದುವೆಯಾಗುತ್ತಿರುವ ವಧುವನ್ನು ಪ್ರೀತಿಸಿದ್ದಾಗಿಯೂ, ಆಕೆಯೂ ತನ್ನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದಾನೆ. ರಾಜೇಶ್‌‌ ವಧುವಿಗೂ ಮದುವೆ ಫಿಕ್ಸ್ ಆಗುವ ಹಂತದಲ್ಲೇ ಆಕೆ ಮತ್ತು ತಾನು ಪರಸ್ಪರ ಪ್ರೀತಿಸಿದ್ದಾಗಿ ವಿನೋದ್ ಹೇಳಿಕೊಂಡಿದ್ದಾನೆ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನನ್ನ ಪಾಲಿನ ಎರಡನೇ ಅಂಬೇಡ್ಕರ್‌, ಸಿಎಂ ಸಿದ್ದರಾಮಯ್ಯನವರು: ಎಚ್‌ ಆಂಜನೇಯ ಗುಣಗಾನ

ಸಹಜ ಸ್ಥಿತಿಗೆ ಮರಲಿದ ಜಮ್ಮು ಕಾಶ್ಮೀರದ ಗಡಿಭಾಗದ ಪ್ರದೇಶಗಳು, ಶಾಲೆಗಳು ಮತ್ತೇ ಆರಂಭ

ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡಲು ಹೋಗಿ ಸಿಕ್ಕಿಬಿದ್ದವರ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಾ

ಇದೊಂದು ಹಾಸ್ಯಾಸ್ಪದ ಕಾರ್ಯಕ್ರಮ: ಸಾಧನಾ ಸಮಾವೇಶಕ್ಕೆ ಆರ್‌ ಅಶೋಕ್ ಆಕ್ರೋಶ

ಸಾಧನಾ ಸಮಾವೇಶದಲ್ಲಿ ಸಿಎಂ ಈ ಪ್ರಶ್ನೆಗೆಲ್ಲ ಉತ್ತರಿಸಬೇಕು: ಎಚ್‌ ವಿಶ್ವನಾಥ್‌

ಮುಂದಿನ ಸುದ್ದಿ
Show comments