Webdunia - Bharat's app for daily news and videos

Install App

ಸೊಸೆಯನ್ನು ತಾನೇ ಕೊಂದು, ನಾಪತ್ತೆ ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್‌

Sampriya
ಶನಿವಾರ, 21 ಜೂನ್ 2025 (18:58 IST)
Photo Credit X
ಫರಿದಾಬಾದ್: ತಾನೇ ಸೊಸೆಯನ್ನು ಕೊಂದು, ಠಾಣೆಯಲ್ಲಿ ನಾಪತ್ತೆ ದೂರನ್ನು ನೀಡಿ, ನಾಟಕವಾಡಿದ್ದ ಮಾವ ಕೊನೆಗೂ ಅರೆಸ್ಟ್ ಆಗಿದ್ದಾನೆ.  

24 ವರ್ಷದ ತನು ಸಿಂಗ್ ಅವರ ದೇಹವನ್ನು ಹರಿಯಾಣದ ಫರಿದಾಬಾದ್‌ನಲ್ಲಿರುವ ಆಕೆಯ ಮನೆಯ ಮುಂಭಾಗದಲ್ಲಿದ್ದ  ಗುಂಡಿಯಿಂದ ಹೊರತೆಗೆಯಲಾಯಿತು. ಎರಡು ತಿಂಗಳ ಹಿಂದೆ ಆಕೆಯನ್ನು ಕೊಲೆ ಮಾಡಿ, ಗುಂಡಿಯಲ್ಲಿ ಹೂತುಹಾಕಿದ್ದಾರೆ.

ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ಮೂಲದ ತನು, ಫರಿದಾಬಾದ್‌ನ ರೋಷನ್ ನಗರದ ಅರುಣ್ ಸಿಂಗ್ ಎಂಬಾತನನ್ನು ಮದುವೆಯಾಗಿದ್ದರು. 

ಶುಕ್ರವಾರ ಮುಂಜಾನೆ ಆಕೆಯ ಕೊಳೆತ ದೇಹವನ್ನು ಸಿಂಗ್ ಕುಟುಂಬದ ಮನೆಯ ಹೊರಗೆ ನೇರವಾಗಿ ಸಾರ್ವಜನಿಕ ಲೇನ್‌ನಲ್ಲಿರುವ 10 ಅಡಿ ಆಳದ ಹೊಂಡದಿಂದ ಹೊರತೆಗೆಯಲಾಯಿತು. 

ಆಕೆಯ ನಾಪತ್ತೆಯಾಗಿದ್ದಾಳೆ ಎಂಬ ದೂರು ನೀಡಿದ 2ತಿಂಗಳ ಬಳಿಕ ಶವ ಪತ್ತೆಯಾಗಿದೆ. 

ಮಾವ ಭೂಪ್ ಸಿಂಗ್ ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ, ಏಪ್ರಿಲ್ 21-22 ರ ರಾತ್ರಿ ಭೂಪ್ ಸಿಂಗ್ ತನ್ನ ಪತ್ನಿ ಸೋನಿಯಾ ಮತ್ತು ಮಗ ಅರುಣ್ ಇಲ್ಲದಿದ್ದಾಗ ಮನೆಯ ಮೊದಲ ಮಹಡಿಯಲ್ಲಿ ತನುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಅವರು ದೇಹವನ್ನು  ಅಗೆದಿದ್ದ ಗುಂಡಿಯಲ್ಲಿ ಹೂತು ಹಾಕಿದ್ದಾನೆ. 

ಇದೀಗ ಈ ಕೊಲೆ ಪ್ರಕರಣದಲ್ಲಿ ಇತರರ ಕೈವಾಡವಿರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವರದಕ್ಷಿಣೆ ಸಲುವಾಗಿ ಕೊಲೆ ನಡೆದಿದೆ ಎನ್ನಲಾಗಿದೆ. 

ಕೊಲೆ ಮಾಡಿದ ಬಳಿಕ ಮಾವ ಭೂಪ್ ಸಿಂಗ್ ಏಪ್ರಿಲ್ 25 ರಂದು ಸೊಸೆ ತನು ಕಾಣೆಯಾಗಿರುವ ಬಗ್ಗೆ ದೂರನ್ನು ನೀಡಿದ್ದಾನೆ.  <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್‌ನಿಂದ 290 ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್‌, ಮೂರು ಹಂತದಲ್ಲಿ ಕಾರ್ಯಚರಣೆ

ಇಸ್ರೇಲ್‌ನಲ್ಲಿರುವ ಭಾರತೀಯರು ತಾಯ್ನಾಡಿಗೆ ವಾಪಾಸ್ಸಾಗಬೇಕೇ, ಸರ್ಕಾರ ಏನ್ ಹೇಳ್ತಿದೆ

ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿರುವ ಜಮೀರ್ ರಾಜೀನಾಮೆ ಕೊಡಬೇಕು: ಎನ್ ರವಿಕುಮಾರ್

ವಿಮಾನ ದುರಂತ ಬೆನ್ನಲ್ಲೇ ಏರ್‌ಇಂಡಿಯಾದ 3 ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಜಿಸಿಎ

Video: ತಮಿಳುನಾಡು ಗವರ್ನರ್ ರವಿ ವಯಸ್ಸು 70 ದಾಟಿದ್ರೂ ಏನು ಎನರ್ಜಿ

ಮುಂದಿನ ಸುದ್ದಿ
Show comments