Webdunia - Bharat's app for daily news and videos

Install App

ಕಲಾಂ ಗೌರವಾರ್ಥ ಮೋದಿ ವಿರುದ್ಧದ ಪ್ರಚಾರ ಫಲಕಗಳನ್ನು ತೆರವುಗೊಳಿಸಿದ ಆಪ್

Webdunia
ಬುಧವಾರ, 29 ಜುಲೈ 2015 (17:04 IST)
ಅಚಾನಕ್ ಆಗಿ ಮರಣವನ್ನಪ್ಪಿದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಸೂಚಿಸುವ ಸಲುವಾಗಿ ಪ್ರಧಾನಿ ಮೋದಿ ವಿರುದ್ಧ ನಡೆಸುತ್ತಿದ್ದ ಆಕ್ರಮಣಕಾರಿ ಜಾಹೀರಾತು ಪ್ರಚಾರವನ್ನು ಆಮ್ ಆದ್ಮಿ ಸರ್ಕಾರ ಬುಧವಾರ ಹಿಂಪಡೆದಿದೆ.
 
ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸಲು ಮೋದಿ ವಿರುದ್ಧ ಪ್ರಚಾರ ನಡೆಸುವ ಉದ್ದೇಶದಿಂದ ತೂಗು ಹಾಕಲಾಗಿದ್ದ ಎಲ್ಲಾ ಪೋಸ್ಟರ್,ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಆಪ್ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
 
ಕೇಂದ್ರ ಸರ್ಕಾರ ದೆಹಲಿಯ ಆಡಳಿತ ನಡೆಸಲು ಆಮ್ ಆದ್ಮಿ ಪಕ್ಷಕ್ಕೆ ಅಡೆತಡೆಗಳನ್ನುಂಟು ಮಾಡುತ್ತಿದೆ. ಪ್ರಧಾನಿಯವರೇ ದೆಹಲಿ ಆಡಳಿತ ನಡೆಸಲು ನಮಗೆ ಅವಕಾಶ ನೀಡಿ ಎಂದು ಬರೆದು ಆಪ್ ಸರ್ಕಾರ ಮೋದಿ ವಿರುದ್ಧ ಜಾಹೀರಾತು ಪ್ರಚಾರ ಆರಂಭಿಸಿತ್ತು.
 
ಆಮ್ ಆದ್ಮಿ ಸರ್ಕಾರ ಸಾರ್ವಜನಿಕರ ಹಣವನ್ನು ತಮ್ಮ ಪಕ್ಷದ ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಲಾಂ ನಿಧನದ ಸಂದರ್ಭವನ್ನು ಬಳಸಿಕೊಂಡು ಜಾಹೀರಾತು ವಿವಾದನ್ನು ತಣ್ಣಗಾಗಿಸಲು ಆಪ್ ಈ ನಿರ್ಧಾರವನ್ನು ಕೈಗೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments