ಮಹಾಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ದಾಳಿ ನಡೆಸಲು ಗುಜರಾತ್ ಕರಾವಳಿ ಮೂಲಕ ಭಾರತವನ್ನು ಪ್ರವೇಶಿಸಿದ್ದ ಶಂಕಿತ 10 ಪಾಕಿಸ್ತಾನಿ ಉಗ್ರರಲ್ಲಿ ಮೂವರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ
ಲಷ್ಕರ್-ಎ-ತೊಯಿಬಾ ಮತ್ತು ಜೈಷ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆಗೆ ಸೇರಿದ 10 ಶಂಕಿತ ಉಗ್ರರ ಅಡಗುತಾಣಗಳನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದು, ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಉಳಿದ ಏಳು ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮನಾಥ್ ದೇವಾಲಯ, ದ್ವಾರಕಾ ದೇವಾಲಯ, ಅಕ್ಷರಧಾಮ ದೇವಾಲಯ, ವಿದ್ಯುತ್ ಘಟಕಗಳು, ಡ್ಯಾಮ್ಗಳು, ಭದ್ರತಾ ನೆಲೆಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.