ನಿನ್ನೆ ಬೆಳಗ್ಗೆ ನೆಲಮಂಗಲ ಬಳಿ ಕೆಎಸ್ಆರ್ಟಿಸಿ ಬಸ್ ಅಗ್ನಿಗೆ ಆಹುತಿಯಾದ ಘಟನೆ ಮರೆಯುವ ಮುನ್ನವೇ ಅಂಥದ್ದೇ ಒಂದು ಘಟನೆ ತೆಲಂಗಾಣದಲ್ಲಿ ನಡೆದಿದೆ. 30 ಪ್ರಯಾಣಿಕರಿದ್ದ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್`ನಲ್ಲಿ ಶಾರ್ಟ್ ಸರ್ಕ್ಯೂಟ್`ನಿಂದಾಗಿ ಬೆಂಕಿ ಹೊತ್ತಿಕೊಂಡು, ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಬಸ್ ಅಗ್ನಿಗಾಹುತಿಯಾಗಿದೆ.
ಹೈದರಾಬಾದ್`ನಿಂದ 50 ಕಿ.ಮೀ ದೂರದ ಅಲೈರ್ ಎಂಬಲ್ಲಿ ಈ ಘಟನೆ ನಡೆದಿದೆ. ವಾರಂಗಲ್`ನಿಂದ ತೆರಳಿದ್ದ ಬಸ್ ಹೈದ್ರಾಬಾದ್`ನತ್ತ ತೆರಳುತ್ತಿತ್ತು. ಈ ಸಂದರ್ಭ, ಇಂಜಿನ್`ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಶೀಘ್ರವೇ ಪ್ರಯಾಣಿಕರನ್ನ ಕೆಳಗಿಳಿಸಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ತೆಲಂಗಾಣ ಸಾರಿಗೆ ಸಚಿವ ಪಿ. ಮಹೇಂದ್ರ ರೆಡ್ಡಿ ಘಟನೆ ಕುರಿತಂತೆ ತನಿಖೆಗೆ ಆದೇಶಿಸಿದ್ದಾರೆ.