Webdunia - Bharat's app for daily news and videos

Install App

ಅಪಘಾತದಲ್ಲಿ ಕೈ ಕಳೆದುಕೊಂಡು ಹಣಕ್ಕಾಗಿ ಅತ್ಯಾಚಾರದ ಕಥೆ ಕಟ್ಟಿದರು

Webdunia
ಗುರುವಾರ, 27 ಅಕ್ಟೋಬರ್ 2016 (16:28 IST)
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಇದು ಆತಂಕಕಾರಿ ಸಂಗತಿಯೇ ಹೌದು. ಆದರೆ ಇದನ್ನೇ ಬಂಡವಾಳವಾಗಿಸಿಕೊಂಡು ಕುಟುಂಬವೊಂದು ಹಣ ಗಳಿಸಲು ಪ್ರಯತ್ನಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಹೌದು, ಅಪಘಾತದಲ್ಲಿ ಕೈ ಕಳೆದುಕೊಂಡ ದಲಿತ ಬಾಲಕಿಯೋರ್ವಳ ಪೋಷಕರು ಆರ್ಥಿಕ ಸಹಾಯ ಸಿಗುವುದೆಂಬ ದುರಾಶೆಯಲ್ಲಿ ತಮ್ಮ ಮಗಳ ಮೇಲೆ ಅತ್ಯಾಚಾರ ಯತ್ನ ಮಾಡುವಾಗ ಕೈ ಕತ್ತರಿಸಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮತ್ತೀಗ ಸತ್ಯ ಬಯಲಾಗಿದ್ದು ತಮ್ಮ ತಪ್ಪನ್ನವರು ಒಪ್ಪಿಕೊಂಡಿದ್ದಾರೆ. 
 
16 ವರ್ಷದ ಬಾಲಕಿ ಪೊಲೀಸರ ಬಳಿ ತನ್ನ ಮೇಲೆ ಅತ್ಯಾಚಾರ ಯತ್ನವಾಗಿತ್ತು. ಮಂಗಳವಾರ ಸಂಜೆ ಆಗ್ರಾದಲ್ಲಿ ಈ ಘಟನೆ ನಡೆದಿದ್ದು ಬೈಕ್ ಮೇಲೆ ಬಂದ ಇಬ್ಬರು ದುಷ್ಕರ್ಮಿಗಳು ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ನನ್ನನ್ನು ರೈಲು ಹಳಿಯ ಮೇಲೆ ಎಳೆದೊಯ್ದು ಕೈ ಕಟ್ ಆಗಲು ಕಾರಣರಾದರು ಎಂದು ಹೇಳಿದ್ದಳು. 
 
ಆದರೆ ಪೊಲೀಸರು ಗಂಭೀರವಾಗಿ ವಿಚಾರಣೆಗೊಳಪಡಿಸಲಾಗಿ ತಾಯಿ ಮತ್ತು ಮಗಳು ಆರ್ಥಿಕ ಸಹಾಯ ಸಿಗಬಹುದೆಂಬ ದುರಾಶೆಯಲ್ಲಿ ತಾವು ಅತ್ಯಾಚಾರ ಕಥೆ ಕಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ.
 
ಅಪಘಾತದಲ್ಲಿ ನನ್ನ ಮಗಳು ಕೈ ಕಳೆದುಕೊಂಡಳು. ಘಟನೆಯನ್ನು ಅತ್ಯಾಚಾರವೆಂಬಂತೆ ಬಿಂಬಿಸಿದರೆ ಆರ್ಥಿಕ ಸಹಾಯ ಸಿಗುವುದೆಂದು ಕೆಲವರು ಸಲಹೆ ನೀಡಿದ್ದರು. ಹೀಗಾಗಿ ತಾವು ಸುಳ್ಳು ಹೇಳಿದ್ದಾಗಿ ಬಾಲಕಿ ತಾಯಿ ಹೇಳಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments