ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿತರಾಗಿರುವ ತೆಹ್ಲಕಾ ಸಂಸ್ಥಾಪಕ ತರುಣ್ ತೇಜಪಾಲ್ ತಾಯಿ ಇಂದು ಇಹಲೋಕ ತ್ಯಜಿಸಿದ್ದರಿಂದ ಅಂತ್ಯಸಂಸ್ಕಾರ ನೆರವೇರಿಸಲು ಸುಪ್ರೀಂಕೋರ್ಟ್ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ತೇಜಪಾಲ್ ತಾಯಿ ಶಕುಂತಲಾ ರವಿವಾರದಂದು ಗೋವಾದಲ್ಲಿ ನಿಧನ ಹೊಂದಿದ್ದರಿಂದ ತೇಜಪಾಲ್ಗೆ ಕೋರ್ಟ್ ಮೂರು ವಾರಗಳ ಜಾಮೀನು ನೀಡಿದೆ ಎಂದು ತೇಜಪಾಲ್ ಪರ ವಕೀಲ ಸಂದೀಪ್ ಕಪೂರ್ ಹೇಳಿದ್ದಾರೆ.
ತಾಯಿಯ ಅಂತ್ಯಕ್ರಿಯಯಲ್ಲಿ ಪಾಲ್ಗೊಳ್ಳಲು ಜಾಮೀನು ನೀಡುವಂತೆ ನ್ಯಾಯಾಲಯದ ಮುಂದೆ ಕೋರಿಕೆ ಸಲ್ಲಿಸಲಾಯಿತು ಎಂದು ವಕೀಲ ಕಪೂರ್ ತಿಳಿಸಿದ್ದಾರೆ.
ಕಳೆದ 2013ರಲ್ಲಿ ಗೋವಾದಲ್ಲಿರುವ ಪಂಚತಾರಾ ಹೋಟೆಲ್ನಲ್ಲಿ ತಮ್ಮ ಸಹದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ 6 ತಿಂಗಳುಗಳಿಂದ ತೇಜಪಾಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ.