Webdunia - Bharat's app for daily news and videos

Install App

ಟಿಟಿವಿ ದಿನಕರನ್ ಬಣದ 18 ಶಾಸಕರನ್ನ ಅನರ್ಹಗೊಳಿಸಿ ಸ್ಪೀಕರ್ ಆದೇಶ

Webdunia
ಸೋಮವಾರ, 18 ಸೆಪ್ಟಂಬರ್ 2017 (11:59 IST)
ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಹೈಡ್ರಾಮಾ ನಡೆದಿದೆ. ಶಶಿಕಲಾ ಆಪ್ತ ಟಿಟಿವಿ ದಿನಕರನ್ ಜೊತೆ ಗುರುತಿಸಿಕೊಂಡಿದ್ದ 18 ಶಾಸಕರನ್ನ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಸ್ಪೀಕರ್ ಧನಪಾಲ್ ಆದೇಶಿಸಿದ್ಧಾರೆ.

ಪಕ್ಷದಿಂದ ಉಚ್ಚಾಟನೆಯಾಗಿರುವ ಟಿಟಿವಿ ದಿನಕರನ್`ಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿದೆ. ನಿನ್ನೆ ತಾನೇ ಸಿಎಂ ಪಳನಿಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ದಿನಕರನ್, ನೀನು ಈಗ ಪಡೆದಿರುವ ಪದವಿ ಚಿನ್ನಮ್ಮ ನಿನಗೆ ಕೊಟ್ಟಿದ್ದು, ಕೂಡಲೇ ರಾಜೀನಾಮೆ ಕೊಡು. ಕೂಡಲೇ ಶಾಸಕಾಂಗ ಸಭೆ ಕರೆದು ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದರು. ಜೊತೆಗೆ ಸರ್ಕಾರ ಉರುಳಿಸುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸ್ಪೀಕರ್`ರಿಂದ ಇಂಥದ್ದೊಂದು ಆದೇಶ ಹೊರಬಿದ್ದಿದೆ.

ಕಳೆದ ತಿಂಗಳಷ್ಟೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ವಿ.ಕೆ. ಶಶಿಕಲಾ ಮತ್ತು ಮಧ್ಯಂತರ ಉಪ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಟಿಟಿವಿ ದಿನಕರನ್ ಅವರನ್ನ ವಜಾ ಮಾಡಿ ಪಕ್ಷದ ಜನರಲ್ ಕೌನ್ಸಿಲ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಶಶಿಕಲಾ ಜೈಲು ಸೇರಿದ ಬಳಿಕ ಟಿಟಿವಿ ದಿನಕರನ್ ಉಪಟಳ ಅಡಗಿಸಲು ಒಂದಾಗಿದ್ದ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ವೀಲಿನದ ಒಪ್ಪಂದದಂತೆ ಈ ನಿರ್ಧಾರ ಕೈಗೊಂಡಿದ್ದರು. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ದಿನಕರನ್ ಕೂಡಲೆ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಿದ್ದರು. ಕೋರ್ಟ್ ಸಹ ಸದ್ಯಕ್ಕೆ ವಿಶ್ವಾಸಮತಯಾಚನೆ ಅಗತ್ಯವಿಲ್ಲ ಎಂದು ಹೇಳಿತ್ತು.
ಈ ಎಲ್ಲ ಘಟನೆಗಳ ಮಧ್ಯೆ ಇವತ್ತು ಕೊಡಗಿನಲ್ಲಿ ನೆಲೆಸಿರುವ ಅಣ್ಣಾಡಿಎಂಕೆ ಅನರ್ಹ ಶಾಸಕರನ್ನ ಟಿಟಿವಿ ದಿನಕರನ್ ಭೇಟಿ ಮಾಡುವ ಸಾಧ್ಯತೆ ಇದ್ದು, ಮುಂದಿನ ಹೋರಾಟದ ಯೋಜನೆ ರೂಪಿಸಲಿದ್ದಾರೆಮದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿಗಣತಿಗೆ ವಿಕಲಚೇತನರ ಬಳಕೆ: ಬಿವೈ ವಿಜಯೇಂದ್ರ ಆಕ್ಷೇಪ

ಕೋಟ್ಯಂತರ ಜನರ ಜೀವನದಲ್ಲಿ ಬದಲಾವಣೆ ತಂದಿರುವ ಗ್ಯಾರಂಟಿ:ರಣದೀಪ ಸುರ್ಜೇವಾಲ

ಎಲ್ಲ ಭಾಗ್ಯಗಳನ್ನು ಹಿಂಪಡೆದು ಮೂರು ನಾಮ ಹಾಕಲು ಸಿದ್ಧತೆ: ಡಾ.ಅಶ್ವತ್ಥನಾರಾಯಣ್

ಮಕ್ಕಳ ಸರಣಿ ಸಾವಿನ ಹಿನ್ನಲೆ: ಕೋಲ್ಡ್ರಿಫ್ ಮಕ್ಕಳ ಸಿರಪ್ ಗೆ ಕರ್ನಾಟಕದಲ್ಲೂ ನಿಷೇಧ

ಜಾತಿ ಸಮೀಕ್ಷೆ ಪ್ರಶ್ನೆ ಕೇಳುವಾಗ ಡಿಕೆ ಶಿವಕುಮಾರ್ ಗರಂ: ಪ್ರಶ್ನೆ ತಯಾರಿಸಿದ್ದು ಯಾರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments