ಸರಕಾರಿ ಕಾರ್ಯಕ್ರಮದಲ್ಲಿ ಮೊಬೈಲ್ನಲ್ಲಿ ಗೇಮ್ಸ್ ವೀಕ್ಷಣೆ ಮಾಡುತ್ತಿದ್ದ ಮಹಿಳಾ ಅಧಿಕಾರಿಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಹಾರೂರ್ ಸಕ್ಕರೆ ಕಾರ್ಖಾನೆಯ ವಿಶೇಷ ಅಧಿಕಾರಿಯಾದ ಎಸ್.ಕವಿತಾ ಕಾರ್ಯಕ್ರಮದಲ್ಲಿ ಮೊಬೈಲ್ ಗೇಮ್ಸ್ ವೀಕ್ಷಣೆ ಮಾಡುತ್ತಿರುವುದನ್ನು ಮಾಧ್ಯಮಗಳು ಬಿತ್ತರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆಗೆ ಆದೇಶ ನೀಡಲಾಗಿದೆ.
ಜಿಲ್ಲಾಧಿಕಾರಿಯೊಂದಿಗೆ ಕೃಷಿಕರ ಸಭೆಗೆ ಆಗಮಿಸಿದ್ದ ಕವಿತಾ, ರೈತರ ಸಂಕಷ್ಟಗಳನ್ನು ವಿಚಾರಿಸುವ ಗೋಜಿಗೆ ಹೋಗದೆ ಮೊಬೈಲ್ನಲ್ಲಿಯೇ ಬಿಜಿಯಾಗಿರುವ ವಿಡಿಯೋ ಮಾಧ್ಯಮಗಳಲ್ಲಿ ಕಂಗೊಳಿಸುತ್ತಿದೆ.
ಇಂತಹ ಘಟನೆಗಳನ್ನು ನೋಡಿದಲ್ಲಿ ಅಧಿಕಾರಿಗಳು ಯಾವ ರೀತಿ ರೈತರ ಕಷ್ಟಗಳನ್ನು ಪರಿಹರಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.