Select Your Language

Notifications

webdunia
webdunia
webdunia
webdunia

ಗಂಗಾ ಮಲೀನತೆ: ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ‘ಸುಪ್ರೀಂ’ ಆದೇಶ

ಗಂಗಾ ಮಲೀನತೆ: ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ‘ಸುಪ್ರೀಂ’ ಆದೇಶ
ನವದೆಹಲಿ , ಗುರುವಾರ, 30 ಅಕ್ಟೋಬರ್ 2014 (09:19 IST)
ಗಂಗಾನದಿಯನ್ನು ಮಾಲಿನ್ಯಗೊಳಿಸುತ್ತಿರುವ ಕೈಗಾರಿಕಾ ಘಟಕಗಳ ವಿರುದ್ಧ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ಪೀಠಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಗಂಗಾ ನದಿಯನ್ನು ಮಲಿನಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಕೇಂದ್ರ ಸರಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 
 
ನದಿಯನ್ನು ಕಲುಷಿತಗೊಳಿಸುತ್ತಿರುವ ಕೈಗಾರಿಕೆಗಳಿಗೆ ನೀರು ಹಾಗೂ ವಿದ್ಯುತ್‌ ಕಡಿತ ಮಾಡುವಂತೆ ಆದೇಶಿಸಿರುವ ಕೋರ್ಟ್‌, ಇಂತಹ ಉದ್ಯಮಗಳ ವಿರುದ್ಧ ಕ್ರಮ ಕೈಗೊಳ್ಳದೇ ಇರುವುದಕ್ಕಾಗಿ  ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ವಿರುದ್ಧ ಕೆಂಡಾಮಂಡಲವಾಗಿದೆ. 
 
ನಿಯಮಗಳನ್ನು ಗಾಳಿಗೆ ತೂರಿ  ಪರಿಸರವನ್ನು ಅಶುದ್ಧಗೊಳಿಸುತ್ತಿರುವ ಕೈಗಾರಿಕ ಘಟಕಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನ್ಯಾಯಾಲಯ ರಾಷ್ಟ್ರೀಯ ಹಸಿರು ಪೀಠಕ್ಕೆ ಸೂಚನೆ ನೀಡಿದೆ. ಅಲ್ಲದೇ ಅವಶ್ಯಕ ಎನಿಸಿದರೆ  ಇಂತಹ ಕೈಗಾರಿಕೆಗಳನ್ನು ಮುಚ್ಚಲು ನಿಮಗೆ ಅಧಿಕಾರವಿದೆ ಎಂದು ಹಸಿರು ಪೀಠಕ್ಕೆ ಹೇಳಿದೆ.

Share this Story:

Follow Webdunia kannada