Webdunia - Bharat's app for daily news and videos

Install App

ಪಾಕ್ ಪ್ರಧಾನಿಗೆ ರಹಸ್ಯ ಪತ್ರ ಬರೆದ ಸಯ್ಯದ್ ಅಲಿ ಷಾ

Webdunia
ಗುರುವಾರ, 3 ಸೆಪ್ಟಂಬರ್ 2015 (15:36 IST)
ಸಯ್ಯದ್ ಅಲಿ ಷಾ ಜಿಲಾನಿಯ ಹುರಿಯತ್ ಕಾನ್ಫರೆನ್ಸ್ ಬಣಕ್ಕೆ ಸೇರಿದ ಮೂವರು ಸದಸ್ಯರ ನಿಯೋಗ ಮಂಗಳವಾರ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಅವರನ್ನು ಭೇಟಿಯಾಗಿ ಪಾಕ್ ಪ್ರಧಾನಿ ನವಾಜ್ ಶರೀಫ್ ಅವರಿಗೆ ತಲುಪಿಸುವಂತೆ ಗೌಪ್ಯ ಪತ್ರವೊಂದನ್ನು ಹಸ್ತಾಂತರಿಸಿದೆ. 

ಹುರಿಯತ್ ಕಾನ್ಫರೆನ್ಸ್ ವಕ್ತಾರ ಅಯಾಝ್ ಅಕ್ಬರ್ ಈ ಬುಧವಾರ ಇದನ್ನು ಸ್ಪಷ್ಟಪಡಿಸಿದ್ದು, ಗಿಲಾನಿ ಸಾಹೇಬರ ಪತ್ರವನ್ನು ನವದೆಹಲಿಯಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಾಸಿತ್ ಅವರ ಬಳಿ ನೀಡಿ ಪಾಕ್ ಪ್ರಧಾನಿ ನವಾಜ್ ಶರೀಫ್‌ಗೆ ತಲುಪಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. 
 
ಗಿಲಾನಿಯವರ ಪ್ರಮುಖ ಸಹಚರರಾದ ಆಯಾಝ್ ಅಕ್ಬರ್, ಪೀರ್ ಸೈಫುಲ್ಲಾ, ಅಲ್ತಾಫ್ ಅಹಮದ್  ಒಳಗೊಂಡ ಮೂವರು ಸದಸ್ಯರ ನಿಯೋಗ ನಿನ್ನೆ ಬಸಿತ್ ಕಚೇರಿಗೆ ಭೇಟಿ ನೀಡಿ ಗಂಟೆಗಳ ಕಾಲ ಮಾತುಕತೆ ನಡೆಸಿತು. 
 
ಅದು ಅತ್ಯಂತ ಮಹತ್ವದ ಪತ್ರ ಗೌಪ್ಯ ಪತ್ರವಾಗಿದೆ.  ಬುಧವಾರ ಇದನ್ನು ಪಾಕ್ ಪ್ರಧಾನಿಗೆ ರವಾನಿಸಲಾಗುವುದು ಎಂದು ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಕ್ಬರ್ ಸುದ್ದಿ ಪತ್ರಿಕೆಯೊಂದರ ಜತೆ ಅವರು ಹೇಳಿದ್ದಾರೆ. 
 
ಎರಡು ದೇಶಗಳ ನಡುವಿನ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ)ರ ಮಟ್ಟದ ಮಾತುಕತೆಯನ್ನು ಪಾಕಿಸ್ತಾನ ಹಿಂದೆಗೆದುಕೊಂಡ ನಂತರ ಇದೇ ಮೊದಲ ಬಾರಿಗೆ ಹುರಿಯತ್ ಸದಸ್ಯರು ಪಾಕಿಸ್ತಾನದ ರಾಯಭಾಯನ್ನು ಭೇಟಿಯಾಗಿದ್ದಾರೆ .

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments