ಲಲಿತ್ಗೇಟ್ ವಿವಾದದಲ್ಲಿ ಸಿಲುಕಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ಖಾತೆಯಿಂದ ಹುದ್ಜೆಯ ಹೆಸರನ್ನು ತೆಗೆದುಹಾಕಿರುವುದು ಬಿಜೆಪಿ ನಾಯಕರಲ್ಲಿ ಆಘಾತ ಮೂಡಿಸಿತ್ತು ಎಂದು ಮೂಲಗಳು ತಿಳಿಸಿವೆ.
ಸುಷ್ಮಾ ಸ್ವರಾಜ್ ''ಕೇಂದ್ರ ವಿದೇಶಾಂಗ ಸಚಿವೆ ಭಾರತ ಸರಕಾರ'" ಎನ್ನುವುದನ್ನು ತೆಗೆದುಹಾಕಿದ್ದರು. ಸುಮಾರು ಒಂದು ಗಂಟೆಯ ನಂತರ ಮತ್ತೆ ತಮ್ಮ ಹುದ್ದೆಯನ್ನು ಹಾಕಿರುವುದು ಬಿಜೆಪಿ ನಾಯಕರಿಗೆ ನೆಮ್ಮದಿ ತಂದಿತು.
ಲಲಿತ್ ಮೋದಿ ಪ್ರಕರಣದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ನೆರವಾಗಿದ್ದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.
ಯಾವುದೇ ಕಾರಣಕ್ಕೂ ಸಚಿವೆ ಸುಷ್ಮಾ ಸ್ವರಾಜ್ರಿಂದ ರಾಜೀನಾಮೆ ಪಡೆಯುವುದಿಲ್ಲ ಎಂದು ಮೋದಿ ಸರಕಾರ ಹಟವನ್ನು ಸಾಧಿಸುತ್ತಿದೆ.
ಲಲಿತ್ ಮೋದಿ ಕುರಿತಂತೆ ಬ್ರಿಟನ್ ಸಂಸದ ಕೈಥ್ ವಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ಸಚಿವೆ ಸುಷ್ಮಾ ಸ್ವರಾಜ್ ಈಗಾಗಲೇ ಒಪ್ಪಿಕೊಂಡಿದ್ದಾರೆ.