Webdunia - Bharat's app for daily news and videos

Install App

ಸುರೇಶ್ ಗೋಪಿ ನೀಡಿದ ಪತ್ರ ಬಿಸಾಕಿದ ಅಮಿತ್ ಶಾ: ಸಿನಿಮಾಗಾಗಿ ಕೇಂದ್ರ ಸಚಿವ ಸ್ಥಾನ ಬಿಡಲೂ ಸಿದ್ಧ ಎಂದ ನಟ

Krishnaveni K
ಗುರುವಾರ, 22 ಆಗಸ್ಟ್ 2024 (13:31 IST)
ನವದೆಹಲಿ: ಕೇರಳದಿಂದ ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿರುವ ಸುರೇಶ್ ಗೋಪಿಗೆ ಈಗ ಸಿನಿಮಾದಲ್ಲಿ ನಟಿಸುವಾಸೆ. ಈ ಬಗ್ಗೆ ಅಮಿತ್ ಶಾ ಬಳಿ ಒಪ್ಪಿಗೆ ಕೇಳಿದಾಗ ಅವರು ಪತ್ರವನ್ನೇ ಕಿತ್ತೆಸೆಸಿದ್ದಾರಂತೆ. ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುರೇಶ್ ಗೋಪಿ ನಟನೆಗಾಗಿ ಮಂತ್ರಿಗಿರಿ ಬಿಡಲೂ ಸಿದ್ಧ ಎಂದಿದ್ದಾರೆ.

ಕೇಂದ್ರದಲ್ಲಿ ರಾಜ್ಯ ಖಾತೆ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸುರೇಶ್ ಗೋಪಿ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬಳಿಕ ಅವರೇ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಬೇಕಾಗಿ ಬಂತು. ಇದೀಗ ಸುರೇಶ್ ಗೋಪಿಗೆ ತಾವು ಒಪ್ಪಿಕೊಂಡ ಸಿನಿಮಾಗಳ ಮುಗಿಸುವ ಸಂಕಟ ಎದುರಾಗಿದೆ.

ಹೀಗಾಗಿ ಅಮಿತ್ ಶಾ ಮುಂದೆ ಹೋಗಿ ನಾನು ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸಬಹುದೇ ಎಂದು ಮನವಿ ಪತ್ರ ಹಿಡಿದು ಹೋಗಿದ್ದರಂತೆ. ಪತ್ರ ನೋಡಿದ ಅಮಿತ್ ಶಾ, ಎಷ್ಟು ಸಿನಿಮಾ ಮಾಡಬೇಕಿದೆ ಎಂದು ಕೇಳಿದರಂತೆ. ಇದಕ್ಕೆ ಗೋಪಿ 20-22 ಸಿನಿಮಾ ಎಂದಿದ್ದಾರೆ. ಇದನ್ನು ಕೇಳಿ ಅಮಿತ್ ಶಾ ಪತ್ರವನ್ನೇ ಬಿಸಾಕಿದರಂತೆ.

ಇದೀಗ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುರೇಶ್ ಗೋಪಿ ‘ಸಿನಿಮಾ ನನ್ನ ಪ್ಯಾಶನ್. ಒಂದು ವೇಳೆ ಸಿನಿಮಾಗಾಗಿ ಮಂತ್ರಿಗಿರಿ ಬಿಡಿ ಎಂದರೆ ಖುಷಿಯಿಂದ ಬಿಡುತ್ತೇನೆ. ಆದರೆ ನನಗೆ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸಿಗಬಹುದು ಎಂಬ ಭರವಸೆಯಿದೆ. ನನ್ನ ಮಂತ್ರಿ ಪದವಿ ನಿರ್ವಹಿಸಲು ನಾಲ್ವರು ಅಧಿಕಾರಿಗಳನ್ನು ಇಟ್ಟುಕೊಂಡಿದ್ದೇನೆ. ಇದು ಸಿನಿಮಾ ಶೂಟಿಂಗ್ ಸೆಟ್ ನಲ್ಲೂ ಮುಂದುವರಿಯಲಿದೆ’ ಎಂದಿದ್ದಾರೆ. ಅವರ ಈ ಮಾತುಗಳು ಈಗ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments