Select Your Language

Notifications

webdunia
webdunia
webdunia
webdunia

ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿಯಿರಲಿ: ಹರಿಯಾಣಾ ಸಿಎಂ

ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿಯಿರಲಿ: ಹರಿಯಾಣಾ ಸಿಎಂ
ಫರಿದಾಬಾದ್ , ಶನಿವಾರ, 5 ಸೆಪ್ಟಂಬರ್ 2015 (19:50 IST)
ಮೀಸಲಾತಿ ಸಾಮಾಜಿಕ ಸಮಸ್ಯೆಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳಿಗೆ ಮೀಸಲಾತಿ ದೊರಕಿಸಲು ಸರಕಾರ ಬದ್ಧವಾಗಿದೆ ಎಂದು ಹರಿಯಾಣಾ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. 
 
ಆರ್ಥಿಕವಾಗಿ ಹಿಂದುಳಿದ  ಪ್ರತಿಯೊಂದು ಸಮಾಜದ ಸಮುದಾಯಕ್ಕೂ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಕಲ್ಪಿಸಬೇಕು ಎನ್ನುವುದು ಸರಕಾರದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.  
 
ಮೀಸಲಾತಿ ಕುರಿತಂತೆ ಚರ್ಚಿಸಲು ಎಲ್ಲಾ ರಾಜಕೀಯ ಪಕ್ಷಗಳು ಸಲಹೆ ನೀಡುವಂತೆ ಸರಕಾರ ಕೋರಿದೆ ಎಂದು ಹೇಳಿದ್ದಾರೆ. 
 
ಸರಕಾರಿ ಉದ್ಯೋಗಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ವ್ಯವಸ್ಥೆ ತರಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ ಮತ್ತು ಬದ್ಧತೆಯನ್ನು ಹೊಂದಿದೆ ಎಂದರು.
 
ರಾಜ್ಯ ಸರಕಾರ ಯುವಕರಿಗಾಗಿ 50 ಸಾವಿರ ಹುದ್ದೆಗಳನ್ನು ಸೃಷ್ಟಿಸುತ್ತಿದದ್ು ಅದರಲ್ಲಿ 30 ಸಾವಿರ ಹುದ್ದೆಗಳ ಆಯ್ಕೆಯ ಬಗ್ಗೆ ಸರಕಾರ ನಿಯಮಾವಳಿಗಳನ್ನು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.
 

Share this Story:

Follow Webdunia kannada