Webdunia - Bharat's app for daily news and videos

Install App

ಸತ್ತ ಸೊಸೆ ದೆವ್ವವಾಗಿ ಕಾಡುವ ಭೀತಿ: ಶವದ ಕಾಲಿಗೆ ಹೊಡೆದರು ಕಬ್ಬಿಣದ ಮೊಳೆ

Webdunia
ಶನಿವಾರ, 25 ಅಕ್ಟೋಬರ್ 2014 (12:05 IST)
ಅಕಾಲ ಮರಣಕ್ಕೀಡಾದ ಸೊಸೆ ಭೂತವಾಗಿ ತಮ್ಮನ್ನು ಕಾಡಬಹುದೆಂಬ ಭಯಕ್ಕೊಳಗಾದ ಆಕೆಯ ಗಂಡನ ಮನೆಯವರು ಶವದ ಕಾಲಿಗೆ ಕಬ್ಬಿಣದ ಮೊಳೆಗಳನ್ನು ಮತ್ತು ಪಿನ್‌ಗಳನ್ನು ಚುಚ್ಚಿದ ಅಸಂಬದ್ಧ, ವಿಲಕ್ಷಣ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. 

ಮಧ್ಯಪ್ರದೇಶದ ಮಾತಾಬಾಸೈಯಾಕ್ಕೆ ಸೇರಿದ ಗ್ರಾಮದಲ್ಲಿ ವಿವಾಹಿತ ಮಹಿಳೆಯೊಬ್ಬಳು  ಅನುಮಾನಾಸ್ಪದವಾಗಿ ಸಾವಿಗೀಡಾದಳು.  ಅಕಾಲ ಮರಣಕ್ಕೀಡಾದ ಆಕೆ ದೆವ್ವವಾಗಿ ತಮಗೆ ಕಾಡಬಹುದೆಂಬ ಮೂಡನಂಬಿಕೆಯಿಂದ ಭಯಕ್ಕೊಳಗಾದ ಆಕೆಯ ಗಂಡನ ಮನೆಯವರು ಆಕೆ ಕಾಲಿಗೆ ಪಿನ್‌ಗಳನ್ನು ಚುಚ್ಚಿದರು. ಮೃತ ಶರೀರದ ಅಂತ್ಯಸಂಸ್ಕಾರ ಮಾಡುವ ಮೊದಲು ಆಕೆಯ ತವರಿನ ಕಡೆಯವರು ಸ್ಥಳಕ್ಕೆ ಆಗಮಿಸಿದ್ದರಿಂದ ಈ ಅಂಧ ಆಚರಣೆ ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ಹೇಳುತ್ತದೆ.  
 
ಮೃತಳ ತವರಿನ ಕಡೆಯವರನ್ನು ಕಂಡ ಕೂಡಲೇ ಗಂಡನ ಮನೆಯವರೆಲ್ಲ ಸ್ಥಳದಿಂದ ಪರಾರಿಯಾದರು. ಆಕೆಯ ಸಾವು ಹೇಗಾಗಿದೆ ಎಂಬುದು ಇನ್ನು ಕೂಡ ಬಹಿರಂಗಗೊಂಡಿಲ್ಲ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅಂತಿಮ ವರದಿ ಬಂದ ನಂತರವೇ ಸತ್ಯ ಬಹಿರಂಗಗೊಳ್ಳಲಿದೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಆಕೆಯ ಹೊಟ್ಟೆಯಲ್ಲಿ ಗಾಯವಿದ್ದು, ಉದರಕ್ಕೆ ಸಂಬಂಧಿಸಿದ ಕಾಯಿಲೆಯಿಂದ ಆಕೆ ಸಾವಿಗೀಡಾಗಿರಬಹುದು ಎಂದು ಹೇಳಿದ್ದಾರೆ. 
 
ದೊರೆತಿರುವ ಮಾಹಿತಿಗಳ ಪ್ರಕಾರ ಮಾತಾಬಾಸೈಯಾಕ್ಕೆ ಸೇರಿದ ಬಸೈಯಾ ಕ್ಷೇತ್ರದ ಚಂದ್ರಪುರಾ ಗ್ರಾಮದ ನಿವಾಸಿಯಾದ ಜಿತೇಂದ್ರ ಗುರ್ಜರ್ ಎಂಬುವವರ ಪತ್ನಿ ಆರತಿ (22)  ಕಳೆದ ಬುಧವಾರ ಅನುಮಾನಾಸ್ಪದವಾಗಿ ಮರಣ ಹೊಂದಿದ್ದಳು.
 
ಅಕಾಲ ಮರಣಕ್ಕೀಡಾದ ಆಕೆ ದೆವ್ವವಾಗಿ ತಮ್ಮನ್ನು ಕಾಡುತ್ತಾಳೆ ಎಂಬ ಮೂಢನಂಬಿಕೆಗೊಳಗಾದ ಆಕೆಯ ಗಂಡನ ಕಡೆಯವರು ಆಕೆಯ ಕಾಲಿಗೆ ಮೊಳೆಗಳನ್ನು ಹೊಡೆದರು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.
 
ಮೃತಳ ತವರಿನ ಕಡೆಯವರು ವರದಕ್ಷಿಣೆ ಕೊಡದ ಕಾರಣಕ್ಕೆ ಆಕೆಯನ್ನು ಕೊಲ್ಲಲಾಗಿದೆ ಎಂದು ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments