Select Your Language

Notifications

webdunia
webdunia
webdunia
webdunia

ಮಸಿ ಬಳಿಸಿಕೊಂಡ ಸುಧೀಂದ್ರ ಕುಲ್ಕರ್ಣಿ ಪಾಕಿಸ್ತಾನಿ ಏಜೆಂಟ್: ಶಿವಸೇನೆ

ಮಸಿ ಬಳಿಸಿಕೊಂಡ ಸುಧೀಂದ್ರ ಕುಲ್ಕರ್ಣಿ ಪಾಕಿಸ್ತಾನಿ ಏಜೆಂಟ್: ಶಿವಸೇನೆ
ಮುಂಬೈ , ಸೋಮವಾರ, 12 ಅಕ್ಟೋಬರ್ 2015 (19:41 IST)
ಶಿವಸೇನೆ ಕಾರ್ಯಕರ್ತರು ಮಸಿ ಬಳೆದ ಸುಧೀಂದ್ರ ಕುಲ್ಕರ್ಣಿ ಪಾಕಿಸ್ತಾನಿ ಏಜೆಂಟ್‌ನಾಗಿದ್ದು, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮುದ್ ಕಸೂರಿ ವಿರುದ್ಧವು ಹೋರಾಟ ತೀವ್ರಗೊಳಿಸಲಾಗುವುದು ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಎಚ್ಚರಿಸಿದ್ದಾರೆ.  
 
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಒಂದು ವೇಳೆ ಭಾರತ ವಿರೋಧಿ ಅನಿಸಿಕೆಗಳನ್ನು ವ್ಯಕ್ತಪಡಿಸಲು ಬಿಡುವುದಿಲ್ಲ. ಒಂದು ವೇಳೆ ಹಾಗಾದಲ್ಲಿ ಅದಕ್ಕೆ ಆಯೋಜಕರೇ ಹೊಣೆಯಾಗುತ್ತಾರೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿರುವ ಹೇಳಿಕೆಯನ್ನು ಶಿವಸೇನೆ ಸ್ವಾಗತಿಸುತ್ತದೆ ಎಂದು ಹೇಳಿದ್ದಾರೆ.
 
ಕುಲ್ಕರ್ಣಿಯ ಮುಖಕ್ಕೆ ಕಪ್ಪು ಮಸಿ ಬಳೆದಿರುವುದು ಒಂದು ಸಣ್ಣ ಪ್ರತಿಭಟನೆ. ಒಂದು ವೇಳೆ ಕಸೂರಿಯ ಪುಸ್ತಕ ಬಿಡುಗಡೆ ಸಮಾರಂಭ ಮುಂದುವರಿದಲ್ಲಿ ಏನಾಗುತ್ತದೆ ಎನ್ನುವುದನ್ನು ಕಾದು ನೋಡಿ ಎಂದು ಗುಡುಗಿದ್ದಾರೆ.
 
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕಸೂರಿ ಭಾರತ ವಿರೋಧಿಯಾಗಿದ್ದಾರೆ ಎನ್ನುವ ಬಗ್ಗೆ ಹಲವು ಸಾಕ್ಷ್ಯಗಳ ಮಾಹಿತಿಯುಳ್ಳ ಪತ್ರವನ್ನು ಸಿಎಂ ಫಡ್ನವೀಸ್‌ಗೆ ಶಿವಸೇನೆ ರವಾನಿಸಿದೆ ಎಂದು ತಿಳಿಸಿದ್ದಾರೆ.
 
ಖುರ್ಷಿದ್ ಕಸೂರಿ ಪಾಕ್ ವಿದೇಶಾಂಗ ಸಚಿವರಾಗಿದ್ದಾಗ ಕಾಶ್ಮಿರ ವಿಷಯ ಕುರಿತಂತೆ ಎಲ್ಲಾ ಪ್ರತ್ಯೇಕತಾವಾದಿ ಸಂಘಟನೆಗಳನ್ನು ಒಂದುಗೂಡಿಸಲು ಸಂಚು ರೂಪಿಸಿದ್ದರು. ಆದ್ದರಿಂದ, ಶಿವಸೇನೆ ಪುಸ್ತಕ ಬಿಡುಗಡೆ ಸಮಾರಂಭ ರದ್ದುಗೊಳಿಸುವಂತೆ ಒತ್ತಾಯಿಸುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ.  

Share this Story:

Follow Webdunia kannada