Webdunia - Bharat's app for daily news and videos

Install App

ಮೆಹಬೂಬಾ ಮುಫ್ತಿಯನ್ನು ನಾಯಿಯ ಬಾಲಕ್ಕೆ ಹೋಲಿಸಿದ ಸುಬ್ರಮಣ್ಯ ಸ್ವಾಮಿ

Webdunia
ಮಂಗಳವಾರ, 6 ಸೆಪ್ಟಂಬರ್ 2016 (18:07 IST)
ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭೆಯ ನಾಮಕರಣಗೊಂಡ ಸಂಸದ ಸುಬ್ರಮಣ್ಯ ಸ್ವಾಮಿ ಸದಾ ಸುದ್ದಿಮಾಡುವುದರಲ್ಲಿ ನಿಸ್ಸೀಮರು. ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯನ್ನು ನಾಯಿಯ ಬಾಲಕ್ಕೆ ಹೋಲಿಸಿ ಅದನ್ನು ನೇರವಾಗಿಸುವುದು  ಸಾಧ್ಯವಿಲ್ಲವೆಂದು ತಿಳಿಸುವ ಮೂಲಕ ಮತ್ತೊಂದು ಸುದ್ದಿ ಮಾಡಿದ್ದಾರೆ.  

ಮೆಹಬೂಬಾ ಜಾಗದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವುದು ಸೂಕ್ತ. ಅವರು ನಾಯಿಯ ಬಾಲದಂತಿದ್ದು, ಅದನ್ನು ನೇರಗೊಳಿಸುವುದು ಸಾಧ್ಯವಿಲ್ಲ ಎಂದು ಸ್ವಾಮಿ ಹೇಳಿದರು.

ಮೆಹಬೂಬಾ ಬದಲಾಗುವುದೇ ಇಲ್ಲ ಎಂದು ಹೇಳಿದ ಸ್ವಾಮಿ ಭಯೋತ್ಪಾದಕರ ಜತೆ ಅವರು ಹಳೆಯ ಕೊಂಡಿಗಳನ್ನು ಹೊಂದಿದ್ದಾರೆಂದು ಪ್ರತಿಪಾದಿಸಿದರು. ಮೆಹಬೂಬಾ ಸುಧಾರಿಸುತ್ತಾರೆಂಬ ನಂಬಿಕೆ ಮೇಲೆ ಬಿಜೆಪಿ ಮೆಹಬೂಬಾ ಜತೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದೆ ಎಂದು ಹೇಳಿದರು.

ಮೆಹಬೂಬಾ ಮತ್ತು ಪ್ರಧಾನಿ ಮೋದಿ ನಡುವೆ ಕಳೆದ ವಾರ ಭೇಟಿ ನಡೆದು ಭಯೋತ್ಪಾದನೆ ನಿಗ್ರಹಕ್ಕೆ ಮತ್ತು ಜನಪ್ರಿಯ ಬೇಡಿಕೆಗಳ ಇತ್ಯರ್ಥಕ್ಕೆ ಏಕರೂಪ ಗುರಿಗೆ ಸಮ್ಮತಿಸಿದ ಬೆನ್ನ ಹಿಂದೆ ಸ್ವಾಮಿ ಕಾಮೆಂಟ್‌ಗಳು ಹೊರಬಿದ್ದಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Prajwal Revanna: ವಕೀಲರನ್ನೂ ನೇಮಿಸಿಕೊಂಡಿಲ್ಲ: ಪ್ರಜ್ವಲ್ ರೇವಣ್ಣ ಪರಿಸ್ಥಿತಿ ಏನಾಗಿದೆ ನೋಡಿ

PM Modi: ಉಗ್ರರ ದಮನಕ್ಕೆ ಸೇನೆಗೆ ಸಂಪೂರ್ಣ ಪವರ್ ಕೊಟ್ಟ ಪ್ರಧಾನಿ ಮೋದಿ

K Annamalai: ಮೋದಿ, ಅಮಿತ್ ಶಾ ಹೆಸರಲ್ಲಿ ಅಮೆರಿಕದಲ್ಲಿ ಅಣ್ಣಾಮಲೈ ವಿಶೇಷ ಪೂಜೆ

ಉಗ್ರರ ಹಿಮ್ಮೆಟ್ಟಿಸಲು ಐಕ್ಯತೆ ಅವಶ್ಯಕ: ಮಾಜಿ ಪ್ರಧಾನಿ ದೇವೇಗೌಡ

RBI:ಎಟಿಎಂಗಳಲ್ಲಿ ₹100, ₹200 ಸಿಗಲ್ಲ ಎಂದು ಗೋಳಾಡುತ್ತಿದ್ದ ಮಂದಿಗೆ ಇಲ್ಲಿದೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments