Webdunia - Bharat's app for daily news and videos

Install App

ಮದರ್ ತೆರೇಸಾ ಮೇಲೆ ಆದಿತ್ಯನಾಥ್ ಆರೋಪ: ಬೆಂಬಲಿಸಿದ ಸ್ವಾಮಿ

Webdunia
ಬುಧವಾರ, 22 ಜೂನ್ 2016 (14:18 IST)
ನೊಬೆಲ್ ಪ್ರಶಸ್ತಿ ವಿಜೇತೆ ಮದರ್ ತೆರೇಸಾ ಭಾರತವನ್ನು ಕ್ರಿಶ್ಚಿನೀಕರಣ ಮಾಡುವ ಪಿತೂರಿಯ ಭಾಗವಾಗಿದ್ದರು ಎಂದು ತಮ್ಮ ಪಕ್ಷದ ಸಂಸದ ಯೋಗಿ ಆದಿತ್ಯನಾಥ್ ಅವರು ಮಾಡಿರುವ ಗಂಭೀರ ಆರೋಪಕ್ಕೆ ಬಿಜೆಪಿ ಸಂಸದ ಸಂಸದ ಸುಬ್ರಮಣಿಯನ್ ಸ್ವಾಮಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. 

ಯೋಗಿ ಆದಿತ್ಯನಾಥ್ ಅವರು ವ್ಯಕ್ತ ಪಡಿಸಿರುವುದು ತಮ್ಮದೇ ಆದ ವೈಯಕ್ತಿಕ ದೃಷ್ಟಿಕೋನವಲ್ಲ. ಕ್ರಿಸ್ಟೋಪರ್ ಹಿಚೆನ್ಸ್ ಬರೆದಿರುವ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಸೃಷ್ಟಿಸಿದ ಪುಸ್ತಕದಲ್ಲಿ ಇದನ್ನು ಬರೆಯಲಾಗಿದೆ. ನೀವು ಗೂಗಲ್‌ಗೆ ಹೋದರೆ ಆಕೆಯ ಬಗ್ಗೆ ಹಲವಾರು ಪುಸ್ತಕಗಳು ಸಿಗುತ್ತವೆ ಎಂದು ಸ್ವಾಮಿ ಹೇಳಿದ್ದಾರೆ. 
 
ಇದಕ್ಕೆ ಉದಾಹರಣೆಯನ್ನು ಸಹ ನೀಡಿರುವ ಸ್ವಾಮಿ, ಕ್ಯಾಲಿಫೋರ್ನಿಯಾದಲ್ಲೊಮ್ಮೆ ಮಧ್ಯಮ ವರ್ಗದ ಜನರ ಪಿಂಚಣಿ ಲೂಟಿ ಮಾಡಿದವನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ಆದರೆ ಆತನಿಗೆ ಶಿಕ್ಷೆ ನೀಡಬೇಡಿ ಎಂದು ತೆರೇಸಾ ಪತ್ರ ಬರೆದಿದ್ದರು. ಯಾಕೆಂದರೆ ಆತ ಭಾರತದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರಕ್ಕಾಗಿ ಆತ ತೆರೇಸಾಗೆ ಮಿಲಿಯನ್ ಡಾಲರ್‌ನಷ್ಟು ಹಣವನ್ನು ನೀಡಿದ್ದ. ಆಕೆಯ ಪತ್ರವನ್ನು ನೋಡಿ ನ್ಯಾಯಮೂರ್ತಿಗೆ ಆಘಾತವಾಗಿತ್ತು. ತೆರೇಸಾರಂತವರು ಕಠಿಣ ಪರಿಶ್ರಮಿಗಳ ನಿವೃತ್ತಿ ವೇತನವನ್ನು ಯೋಸು ಕ್ರಿಸ್ತನ ಹೆಸರಲ್ಲಿ ದರೋಡೆ ಮಾಡಿದಂತವನ ಪರವಾಗಿ ನಿಲ್ಲುತ್ತಾರೆ ಎಂಬುದು ಶಾಕ್ ಆಗಿದೆ ಎಂದಿದ್ದ ಅವರು ಎಲ್ಲ ಹಣವನ್ನು ಹಿಂತಿರುಗಿಸುವಂತೆ ಅಪರಾಧಿಗೆ ಆದೇಶ ನೀಡಿದ್ದರು. ಈ ರೀತಿ ಅವರಿಗೆ ಛೀಮಾರಿ ಹಾಕಲಾಗಿತ್ತು. ಧಾರ್ಮಿಕ ನಾಯಕಿಗೆ ಕ್ರಿಮಿನಲ್ ಸಹವಾಸವೇಕೆ ಎಂದು ಸ್ವಾಮಿ ಪ್ರಶ್ನಿಸಿದ್ದಾರೆ. 
 
ಶನಿವಾರ ಉತ್ತರ ಪ್ರದೇಶದಲ್ಲಿ ರಾಮಕಥಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನ್ನಾಡುತ್ತಿದ್ದ ಗೋರಕ್ಪುರ ಸಂಸದ ಯೋಗಿ ಆದಿತ್ಯನಾಥ್, "ಭಾರತವನ್ನು ಕ್ರಿಶ್ಚಿನೀಕರಣ ಮಾಡುವ ಕುತಂತ್ರದಲ್ಲಿ ತೆರೇಸಾ ಪಾತ್ರ ಕೂಡ ಇತ್ತು.  ಕ್ರಿಶ್ಚಿಯನೈಸೇಷನ್ ಪ್ರಕರಣಗಳು ಅರುಣಾಚಲ ಪ್ರದೇಶ, ತ್ರಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ಭಾಗಗಳಲ್ಲಿ ಪ್ರತ್ಯೇಕತಾವಾದಿ ಚಳುವಳಿಗಳಿಗೆ ಕಾರಣವಾಯಿತು", ಎಂದು ಹೇಳಿದ್ದರು.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಸಿದ್ದರಾಮಯ್ಯ ಇಲ್ಲದಿದ್ದರೆ ನಾನಿಲ್ಲ: ಕೆಎನ್ ರಾಜಣ್ಣ

ಮುಂದಿನ ಸುದ್ದಿ
Show comments