Webdunia - Bharat's app for daily news and videos

Install App

ಕಳ್ಳತನದಲ್ಲೂ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿ

Webdunia
ಗುರುವಾರ, 27 ಆಗಸ್ಟ್ 2015 (12:11 IST)
ವೈಭೋಗದ ಜೀವನ ನಡೆಸಲು ಇಂದಿನ ಯುವ ಜನಾಂಗ ಕಳ್ಳತನ, ಕೊಲೆಯಂತಹ ಅಪರಾಧಿ ಕೃತ್ಯಗಳಲ್ಲಿ ತೊಡಗಿಕೊಳ್ಳುವುದು ಇಂದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ತಮಿಳುನಾಡಿನಲ್ಲಿ ಒಬ್ಬ ವಿದ್ಯಾರ್ಥಿ ಕಳ್ಳತನದಲ್ಲೂ ಪ್ರಾಮಾಣಿಕತೆ ಮೆರೆದು ಗಮನಸೆಳೆದಿದ್ದಾನೆ. ಆತ ಕಳ್ಳತನ ಮಾಡಿದ್ದು ಏಕೆ ಎಂಬ ಕಾರಣ ಸಹ ಓದುಗರ ಕಣ್ಣಲ್ಲಿ ನೀರು ತರಿಸುವಂತಿದೆ. 

ಹೌದು..ತಮಿಳುನಾಡಿನ ಪೆರಿಯಾರ ನಗರದಲ್ಲಿ ಈ ಘಟನೆ ನಡೆದಿದ್ದು,ವಿದ್ಯಾರ್ಥಿಯೋರ್ವ ತನ್ನ ತಾಯಿಯ ಚಿಕಿತ್ಸೆಗೆ ಹಣವಿಲ್ಲದಾದಾಗ ಕಳ್ಳತನಕ್ಕೆ ಕೈ ಹಾಕಿದ್ದಾನೆ. ಆದರೆ ಆತನ ತಾಯಿ ಬದುಕುಳಿಯಲಿಲ್ಲ. ಹೀಗಾಗಿ ಕದ್ದ ಹಣವನ್ನಾತ ಮರಳಿ ನೀಡಿದ್ದಾನೆ. 
 
ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿರುವ ಯುವಕನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗಾಗಿ ಆತ ನಿವೃತ್ತ ಉಪ ತಹಶೀಲ್ದಾರ್ ರಾಜಮಾನಿಕಮ್ (75) ಅವರ ಮನೆಯಿಂದ ಆತ ಹಣ ಕದ್ದಿದ್ದ. ನೀರು ಕುಡಿಯುವ ನೆಪದಲ್ಲಿ ಮನೆ ಒಳಗೆ ಬಂದಿದ್ದ ಆತ ತಹಶೀಲ್ದಾರ್ ಪತ್ನಿ ನೀರು ತರಲು ಒಳಗೆ ಹೋದಾಗ ಟೇಬಲ್ ಮೇಲೆ ಇಟ್ಟಿದ್ದ 5 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದ. ಈ ಕುರಿತು ತಹಶೀಲ್ದಾರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ತಾವು ಆಗ ತಾನೇ ಬ್ಯಾಂಕ್‌ನಿಂದ ತಂದಿದ್ದ ಹಣವನ್ನು ಅಪರಿಚಿತ ಯುವಕನೊಬ್ಬ ಕದ್ದು ಪರಾರಿಯಾಗಿದ್ದಾನೆ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು.
 
ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ನಿನ್ನೆ ಮೋಟಾರ್ ಬೈಕ್‌ನಲ್ಲಿ ವೃದ್ಧ ತಹಶೀಲ್ದಾರ್ ದಂಪತಿಗಳ ಮನೆಗೆ ಬಂದ ಯುವಕ ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ ಮತ್ತು ಕದ್ದ 5 ಲಕ್ಷದಲ್ಲಿ 4.5 ಲಕ್ಷ ಹಣವನ್ನು ಮರಳಿಸಿದ ಮತ್ತು ಉಳಿದ 50,000 ಹಣಕ್ಕೆ ಬದಲಾಗಿ ತನ್ನ ಬೈಕ್ ಇಟ್ಟುಕೊಳ್ಳುವಂತೆ ಹೇಳಿದ್ದಾನೆ. ತಾಯಿಯ ಚಿಕಿತ್ಸೆಗೆ 50 ಸಾವಿರ ಖರ್ಚಾಗಿರುವುದರಿಂದ 4.5 ಲಕ್ಷ ರೂ ಹಣವನ್ನಾತ ಮರಳಿಸಿದ್ದಾನೆ.
 
ಹಣ ಮರಳಿ ಸಿಕ್ಕಿರುವುದರಿಂದ ಆತನ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ದಂಪತಿಗಳು ವಾಪಸ್ ತೆಗೆದುಕೊಂಡಿದ್ದಾರೆ.
 
ವಿಚಾರಣೆ ನಡೆಸಿದ ಬಳಿಕ ವಿದ್ಯಾರ್ಥಿಯನ್ನು ಬಿಡುಗಡೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments