Webdunia - Bharat's app for daily news and videos

Install App

ಪ್ರಧಾನಿ ಮೋದಿಯಿಂದ ಅಂತರ ಕಾಯ್ದುಕೊಳ್ಳಲು ಎಸ್‌ಪಿಜಿ ಕಮಾಂಡೋ ಪಡೆಗಳಿಗೆ ಆದೇಶ

Webdunia
ಬುಧವಾರ, 30 ಜುಲೈ 2014 (14:24 IST)
ಕೇಂದ್ರ ಸಚಿವ ನಿತಿನ್ ಗಡ್ಕರಿ ನಿವಾಸದಲ್ಲಿ ಕಳ್ಳಗಿವಿ ಪ್ರಕರಣಕ್ಕೆ ಸಂಬಂಧಿಸಿದ ಬಿಸಿ, ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಟ್ಟಿದೆ. 
 
ಮಾಧ್ಯಮ ವರದಿಗಳ ಪ್ರಕಾರ, ಪ್ರಧಾನಮಂತ್ರಿಯ ರಕ್ಷಣೆಯ ಹೊಣೆಹೊತ್ತ ವಿಶೇಷ ರಕ್ಷಣಾ ದಳ(ಎಸ್‌ಪಿಜಿ)ವನ್ನು ಕೂಡಾ ನರೇಂದ್ರ ಮೋದಿಯಿಂದ ದೂರವಿರುವಂತೆ ಆದೇಶಿಸಲಾಗಿದೆ, 
 
ಪ್ರಧಾನಮಂತ್ರಿ ನರೇಂದ್ರ ಮೋದಿ ಇತರರೊಂದಿಗೆ ನಡೆಸುವ ರಹಸ್ಯ ಸಂಭಾಷಣೆಗಳನ್ನು ಎಸ್‌ಪಿಜಿ ದಳ ಆಲಿಸದಿರಲಿ ಎನ್ನುವ ಉದ್ದೇಶದಿಂದ ಎಸ್‌ಪಿಜಿ ತಂಡಕ್ಕೆ ಪ್ರಧಾನಿ ಮೋದಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಲಾಗಿದೆ.
 
ಕೆಲ ವರ್ಷಗಳ ಹಿಂದೆ ಮಾಜಿ ಪ್ರಧಾನಮಂತ್ರಿಗಳ ರಹಸ್ಯ ಮಾತುಗಳನ್ನು ಆಲಿಸಿದ್ದ ಎಸ್‌ಪಿಜಿ ಪಡೆಯ ಸದಸ್ಯನೊಬ್ಬ ರಹಸ್ಯ ಮಾತುಕತೆಗಳನ್ನು ಇತರರಿಗೆ ರವಾನಿಸಿದ್ದ. ಇದರಿಂದ ಇದೀಗ ಎಚ್ಚೆತ್ತ ಸರಕಾರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ.
 
ಈ ಬೆಳವಣಿಗೆಗಳಿಂದ ಬಿಜೆಪಿ ನಾಯಕರಿಗೆ ಸಂತಸವಾಗಿದ್ದು, ಇನ್ಮುಂದೆ ಪ್ರಧಾನಿಯೊಂದಿಗೆ ಸೂಕ್ಷ್ಮವಾದ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬಹುದು ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments