Webdunia - Bharat's app for daily news and videos

Install App

ಸಂಸತ್ತಿನಲ್ಲಿ ಕಲಾಪಕ್ಕೆ ಅಡ್ಡಿ; ಸೋನಿಯಾರವರೇ ಜವಾಬ್ದಾರರು: ಬಿಜೆಪಿ

Webdunia
ಸೋಮವಾರ, 3 ಆಗಸ್ಟ್ 2015 (17:36 IST)
ಸಂಸತ್ತಿನಲ್ಲಿ ಕಾಂಗ್ರೆಸ್ ಕೋಲಾಹಲ ಮುಂದುವರೆಸಿರುವುದಕ್ಕೆ ಕ್ರೋಧಗೊಂಡಿರುವ ಬಿಜೆಪಿ, ಮುಂಗಾರು ಅಧಿವೇಶನಕ್ಕೆ  ಉಂಟಾಗುತ್ತಿರುವ ಅಡೆತಡೆಗಳಿಗೆ ಸೋನಿಯಾ ಗಾಂಧಿಯವರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದೆ. ಜತೆಗೆ ಸೋನಿಯಾ ನೇತೃತ್ವದ ಪಕ್ಷ "ಗೊಂದಲ ಮತ್ತು ಆತಂಕ" ದಿಂದಾಗಿ ಈ ರೀತಿಯ ವರ್ತನೆಯನ್ನು ತೋರುತ್ತಿದೆ ಎಂದು ಅಣಕವಾಡಿದೆ. 

 
ಬಿಜೆಪಿಯ ಮುಖ್ಯ ಕಾರ್ಯಾಲಯದಲ್ಲಿ ವರದಿಗಾರರರೊಂದಿಗೆ ಮಾತನಾಡುತ್ತಿದ್ದ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ನಿರ್ಮಲಾ "ಸೀತಾರಾಮನ್, ಕಾಂಗ್ರೆಸ್ ಸದಸ್ಯರು ಭಿತ್ತಿ ಪತ್ರ, ಪೋಸ್ಟರ್‌ಗಳನ್ನು ಹಿಡಿದುಕೊಂಡು ಸ್ಪೀಕರ್ ಎದುರು ಗಲಾಟೆ ನಡೆಸುತ್ತಿದ್ದಾರೆ. ಇವೆಲ್ಲವೂ ಸೋನಿಯಾ ಸಲಹೆಯಂತೆ ನಡೆಯುತ್ತಿದೆ. ಮುಂಗಾರು ಅಧಿವೇಶನ ವಿಫಲತೆಯನ್ನು ಕಂಡರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ನೇರ ಹೊಣೆಗಾರರಾಗಿರುತ್ತಾರೆ", ಎಂದು ಹೇಳಿದ್ದಾರೆ. 
 
2010 ರ ಚಳಿಗಾಲದ ಅಧಿವೇಶನವೂ ಜೆಪಿಸಿ ಮತ್ತು 2 ಜಿ ಹಗರಣಗಳಿಂದಾಗಿ ವಾಷ್ ಔಟ್ ಆಗಿತ್ತು.  
 
"ಆದರೆ ಆಗ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿತ್ತು. ಆದರೆ ಲಲಿತ್ ಮೋದಿ ಪ್ರಕರಣದಲ್ಲಿ ನಮ್ಮ ಪಕ್ಷದ ಸಚಿವರಿಂದ ಯಾವುದೇ ರೀತಿಯ  ಕಾನೂನು ಉಲ್ಲಂಘನೆ ಆಗಿಲ್ಲ," ಎಂದು ಅವರು ಹೇಳಿದ್ದಾರೆ.
 
"ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಚರ್ಚೆಗೆ ಬರಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಅವರು ಚರ್ಚೆಗೆ ಬಂದರೆ ಕೆಲವು ಕಠಿಣ ವಾಸ್ತವಗಳನ್ನು ಹೊರತೆಗೆಯುತ್ತಾರೆ ಎಂದು ಕಾಂಗ್ರೆಸ್ ಚರ್ಚೆ ನಡೆಸಲು ಭಯ ಪಡುತ್ತದೆ. ಆದ್ದರಿಂದ ವೃಥಾ ಕೋಲಾಹಲವನ್ನು ನಡೆಸುತ್ತಿದೆ, " ಎಂದು ಸೀತಾರಾಮನ್ ಆರೋಪಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments