Webdunia - Bharat's app for daily news and videos

Install App

ಅಪಹರಣಕಾರರು ಒಳ್ಳೆಯವರು, ದೂರು ನೀಡಲಾರೆ ಎಂದ ಸ್ನಾಪ್‌ಡೀಲ್ ಉದ್ಯೋಗಿ

Webdunia
ಶನಿವಾರ, 13 ಫೆಬ್ರವರಿ 2016 (12:36 IST)
ಎರಡು ದಿನಗಳ ಕಾಲ ನಾಪತ್ತೆಯಾಗಿ ಸುರಕ್ಷಿತವಾಗಿ ಮರಳಿರುವ ಸ್ನಾಪ್‌ಡೀಲ್ ಉದ್ಯೋಗಿ ದಿಪ್ತಿ ಸರ್ನಾ ಅಪಹರಣಕಾರರ ವಿರುದ್ಧ ದೂರು ನೀಡಲು ನಿರಾಕರಿಸಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣವನ್ನು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಅದೇನಂತಿರಾ? ಮುಂದೆ ಓದಿ. 

'ನನ್ನನ್ನು ಅಪಹರಿಸಿದವರು ತುಂಬಾ ಒಳ್ಳೆಯವರು, ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡರು. ಸಮಯಕ್ಕೆ ಸರಿಯಾಗಿ ಊಟ ಕೊಟ್ಟರು. ಅವರ ವಿರುದ್ಧ ದೂರು ನೀಡಲಾರೆ ಎಂದಿದ್ದಾರೆ ದಿಪ್ತಿ.
 
ನಾಲ್ವರು ಯುವಕರು ತಮ್ಮ ಗುರುತು ಪತ್ತೆ ಹಚ್ಚದಿರಲು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದರು. ಆದರೆ, ಯಾವುದೇ ರೀತಿಯ ದೈಹಿಕ ಹಲ್ಲೆ ಮಾಡಿಲ್ಲ ಎಂದು ದಿಪ್ತಿ ಸ್ಪಷ್ಟಪಡಿಸಿದ್ದಾರೆ.
 
24 ರ  ದಿಪ್ತಿ ಸ್ನ್ಯಾಪ್‌ಡೀಲ್‌ ಶಾಪಿಂಗ್ ವೆಬ್‌ಸೈಟ್‌ನಲ್ಲಿ ಉದ್ಯೋಗಿಯಾಗಿದ್ದಾಳೆ. ಗುರ್ಗಾಂವ್‌ನಿಂದ ತನ್ನ ಮನೆಯಿರುವ ಗಾಜಿಯಾಬಾದ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ನಾಲ್ವರು ಆರೋಪಿಗಳು ಆಕೆಯನ್ನು ಅಪಹರಿಸಿದ್ದರು ಎಂದು ಹೇಳಲಾಗುತ್ತಿದೆ. 36 ಗಂಟೆಗಳ ನಂತರ ಆಕೆ ಪೋಷಕರಿಗೆ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದ್ದಳು.
 
ಆಕೆಯನ್ನು ಅಪಹರಿಸಿದ ಜಾಗದಲ್ಲೇ ಮರಳಿ ಬಿಡಲಾಯಿತು ಎಂದು ಆಕೆಯ ತಂದೆ ತಿಳಿಸಿದ್ದಾರೆ
 
ಆಕೆ ನಾಪತ್ತೆಯಾಗಿದ್ದ ಎರಡು ದಿನ ಏನು ನಡೆಯಿತು ಎಂಬುದು ಇನ್ನು ಅಸ್ಪಷ್ಟವಾಗಿದ್ದು , ಆಕೆಯನ್ನು ಮತ್ತೆ ವಿಚಾರಣೆಗೊಳಪಡಿಸಲಾಗುವುದು. ಅಪಹರಣಕಾರರು ಈ ವೃತ್ತಿಗೆ ಹೊಸಬರಾಗಿರಬೇಕು. ಭಯದಿಂದ ಆಕೆಯನ್ನು ಚೆನ್ನಾಗಿ ನೋಡಿಕೊಂಡು ಸುರಕ್ಷಿತವಾಗಿ ಮರಳಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments