Webdunia - Bharat's app for daily news and videos

Install App

ರಾಹುಲ್ ಗಾಂಧಿ 'ನಿದ್ರಾ ಸುಂದರ'

Webdunia
ಶುಕ್ರವಾರ, 23 ಡಿಸೆಂಬರ್ 2016 (10:28 IST)
ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರದ ವಿರುದ್ಧ ನಿಲ್ಲದ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು  ಬಿಜೆಪಿ ಸಂಸದೆ ಪೂನಂ ಮಹಾಜನ್,'ನಿದ್ರಾ ಸುಂದರ' ಎಂದು ಅಣಕಿಸಿದ್ದಾರೆ.

 
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದಿವಂಗತ ಬಿಜೆಪಿ ನಾಯಕ ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್, ಸಂಸತ್‌ಗೆ ಹೋದಾಗಲೆಲೆಲ್ಲ ತೂಕಡಿಸುವ ರಾಹುಲ್ ಅವರು ನಿದ್ರಾ ಸುಂದರ ಎಂದು ಅಪಹಾಸ್ಯ ಮಾಡಿದ್ದಾರೆ. ಜತೆಗೆ ನಿದ್ದೆಯಿಂದ ಎದ್ದು ನೋಟು ನಿಷೇಧದ ರಾಗ ಹಾಡುವುದನ್ನು ನಿಲ್ಲಿಸಿ ಎಂದು ರಾಹುಲ್ ಅವರಿಗೆ ಸಲಹೆ ನೀಡಿದ್ದಾರೆ. 
 
ರಾಹುಲ್ ಅವರನ್ನು ನಾನು ನಿದ್ರಾ ಸುಂದರ ಎಂದು ಕರೆಯುತ್ತೇನೆ. ನಾನು ಸಂಸತ್‌ಗೆ ಹೋದಾಗಲೆಲ್ಲ ಅವರು ಮಲಗಿರುವುದನ್ನೇ ನೋಡುತ್ತೇನೆ. ಕೈ ಯುವರಾಜ ಹಣದುಬ್ಬರ, ನೋಟು ನಿಷೇಧದ ಬಗ್ಗೆ ಮಾತನಾಡುತ್ತಾರೆ ಎಂದುಕೊಳ್ಳುತ್ತಿರುತ್ತೇನೆ. ಕನಿಷ್ಟ ಪಕ್ಷ ಅವರು ನಿದ್ದೆಯಿಂದ ಏಳಲಿ ಎಂದಿರುವ ಮಹಾಜನ್, ದೇಶ ಎದ್ದಿದೆ ರಾಹುಲ್, ನೀವು ಯಾವಾಗ ಏಳುವಿರಿ ಎಂದು ಪ್ರಶ್ನಿಸಿದ್ದಾರೆ.
 
ಇಂತಹ ನಾಯಕರಿಗೆ ನನ್ನ ಒಂದೇ ಸಲಹೆ ಏನೆಂದರೆ, ನೋಟು ನಿಷೇಧ ರಾಗ ಹಾಡುವುದನ್ನು ನಿಲ್ಲಿಸಿ, ದೇಶ ಮುನ್ನಡೆಯುತ್ತಿದೆ. ಸುವರ್ಣಯುಗ ಆರಂಭವಾಗಿದೆ ಎಂದಿದ್ದಾರೆ ಪೂನಮ್.
 
ಮುಂಬೈನ ಉತ್ತರ ಕೇಂದ್ರ ವಿಭಾಗದ ಸಂಸದೆಯಾಗಿರುವ 36 ವರ್ಷದ ಪೂನಂ ಅವರು, ಅನುರಾಗ್ ಠಾಕೂರ್‌ ಅವರಿಂದ ತೆರವಾಗಿದ್ದ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷರಾಗಿ ಅಧಿಕಾರವನ್ನು ಗುರುವಾರ ವಹಿಸಿಕೊಂಡರು.
 
36 ವರ್ಷದ ಮಹಾಜನ್ ಉತ್ತರ-ಕೇಂದ್ರ ಮುಂಬೈನ ಸಂಸದರಾಗಿದ್ದು, ಅನುರಾಗ್ ಠಾಕೂರ್ ಬಳಿಕ ಭಾರತೀಯ ಜನತಾ ಯುವ ಮೋರ್ಚಾವನ್ನು ಮುನ್ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನವನ್ನು ಉಳಿಸಲು ಬಿಹಾರದಲ್ಲಿ ನಮ್ಮೊಂದಿಗೆ ಸೇರಿ: ರಾಹುಲ್ ಗಾಂಧಿ ಮನವಿ

ಧರ್ಮಸ್ಥಳ, ಅನಾಮಿಕ ಬಿಜೆಪಿಯ ಸೃಷ್ಟಿ: ಈಶ್ವರ್ ಖಂಡ್ರೆ ಹೊಸ ಬಾಂಬ್‌

ಪಕ್ಷದ ಶಿಸ್ತು ಉಲ್ಲಂಘನೆ: ಶಾಸಕಗೆ ಶಿವಗಂಗಾಗೆ ಬಿಸಿ ಮುಟ್ಟಿಸಿದ ಡಿಕೆ ಶಿವಕುಮಾರ್‌

ಆನ್‌ಲೈನ್‌ನಲ್ಲಿ ಹಾಲು ಆರ್ಡರ್ ಮಾಡಲು ಹೋಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧೆ

ಹಿಮಾಚಲ ಪ್ರದೇಶದಲ್ಲಿ ರಣಮಳೆಗೆ 124ಕ್ಕೂ ಅಧಿಕ ಸಾವು

ಮುಂದಿನ ಸುದ್ದಿ
Show comments