Webdunia - Bharat's app for daily news and videos

Install App

ಆರ್‌‌ಎಸ್ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣ: ಸಿಪಿಐ(ಎಮ್) ಕಾರ್ಯಕರ್ತರ ಬಂಧನ

Webdunia
ಗುರುವಾರ, 18 ಫೆಬ್ರವರಿ 2016 (14:05 IST)
27 ವರ್ಷದ ಆರ್‌ಎಸ್ಎಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಣ್ಣೂರು ಪೊಲೀಸರು ನಿನ್ನೆ ರಾತ್ರಿ 6 ಮಂದಿ ಸಿಪಿಐ(ಎಮ್) ಕಾರ್ಯಕರ್ತರನ್ನು ಬಂಧಿಸಿದ್ದಾರೆ. 
 
ಬಂಧಿತರನ್ನು ಸಿಜಯನ್, ಜೊಯ್ ಜೊಸೆಫ್, ಪ್ರಶಾಂತ, ಪ್ರಬೇಶ್, ಲಿಬಿನ್ ಮತ್ತು ಆಕಾಶ್ ಎಂದು ಗುರುತಿಸಲಾಗಿದ್ದು  ಎಲ್ಲರೂ ಕಣ್ಣೂರು ಜಿಲ್ಲೆಯ ನಿವಾಸಿಗಳೇ ಆಗಿದ್ದಾರೆ. 
 
ಆರ್‌ಎಸ್ಎಸ್ ಕಾರ್ಯಕರ್ತ ಸುಜಿತ್‌ ಮೇಲೆ 20 ಜನರ ಗುಂಪು ಸೋಮವಾರ ರಾತ್ರಿ ದಾಳಿ ನಡೆಸಿತ್ತು. ವೃದ್ಧ ತಂದೆ-ತಾಯಿಗಳ ಸಮ್ಮುಖದಲ್ಲಿಯೇ ಸುಜಿತ್ ಸಿಪಿಐ(ಎಮ್) ಕಾರ್ಯಕರ್ತರಿಂದ ಹೆಣವಾಗಿದ್ದ. ಘಟನೆಯಲ್ಲಿ ಆತನ ಪೋಷಕರಿಗೆ ಮತ್ತು ಸಹೋದರರಿಗೂ ಗಾಯಗಳಾಗಿದ್ದವು. 
 
ಈ ದಾಳಿಯ ಹಿಂದೆ ಸಿಪಿಐ(ಎಮ್) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ಈ ಆರೋಪವನ್ನು ನಿರಾಕರಿಸಿದ್ದ ಸಿಪಿಐ(ಎಮ್) ಪಕ್ಷದವರು ಸ್ಥಳೀಯ ಹುಡುಗಿಯನ್ನು ಚುಡಾಯಿಸಿದ್ದೇ ಈ ಘಟನೆಗೆ ಕಾರಣ ಎಂದು ವಾದಿಸಿದ್ದರು. 
 
ಘಟನೆಯ ನಂತರ ಬಿಜೆಪಿ ಮತ್ತು ಸಿಪಿಐ(ಎಮ್) ನಡುವೆ ಘರ್ಷಣೆ ಸಹ ನಡೆದಿತ್ತು. ಆರ್‌ಎಸ್ಎಸ್ ಸೇವಾಕೇಂದ್ರ ಮತ್ತು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ನಾಡಬಾಂಬ್‌ನ್ನು ಸಹ ಎಸೆಯಲಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments