Webdunia - Bharat's app for daily news and videos

Install App

ಪಾಕ್ ಗಾಯಕ ಗುಲಾಮ್ ಅಲಿ ‘ಡೆಂಗ್ಯೂ ಕಲಾಕಾರ' ಎಂದ ಬಾಲಿವುಡ್ ಗಾಯಕ

Webdunia
ಶುಕ್ರವಾರ, 9 ಅಕ್ಟೋಬರ್ 2015 (16:25 IST)
ಪಾಕಿಸ್ತಾನದ ಪ್ರಖ್ಯಾತ ಗಾಯಕ ಗುಲಾಮ್ ಅಲಿಯವರನ್ನು ಬಾಲಿವುಡ್ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ‘ಡೆಂಗ್ಯೂ ಕಲಾಕಾರ' ಎಂದು ಹೀಯಾಳಿಸಿದ್ದಾರೆ.

ಮುಂಬೈಯಲ್ಲಿ ಇಂದು ನಡೆಯಬೇಕಿದ್ದ ಪಾಕ್ ಗಝಲ್ ಗಾಯಕ ಗುಲಾಮ್ ಅಲಿಯವರ ಸಂಗೀತ ಕಾರ್ಯಕ್ರಮ ಶಿವಸೇನೆ ವಿರೋಧದಿಂದಾಗಿ ರದ್ದಾಗಿರುವುದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಶಿವಸೇನೆ ಪರವಾಗಿ  ಮಾತನಾಡಿದ್ದಾರೆ.
 
ಶಿವಸೇನೆಯನ್ನು ಬೆಂಬಲಿಸಿ ಸರಣಿ ಟ್ವಿಟ್ಟರ್ ಪ್ರಕಟಿಸಿರುವ ಅವರು, ದೇಶ ಭಕ್ತಿಯು ಒಬ್ಬ ‘ಡೆಂಗ್ಯೂ ಕಲಾಕಾರ’ ನಿಗಿಂತಲೂ ಹೆಚ್ಚು ಮಹತ್ವ ಪಡೆಯುತ್ತದೆ, ಎಂದಿದ್ದಾರೆ.
 
“ಆತ್ಮಾಭಿಮಾನವಿಲ್ಲದ ಇವರಿಗೆ, ಉಗ್ರವಾದವೊಂದೇ ಗೊತ್ತಿರುವುದು. ಹಿಂದೂ ಪರ ರಾಜಕೀಯ ಪಕ್ಷಗಳು ಕೇವಲ ಭಯೋತ್ಪಾದನೆಯ ಕುರಿತು ಬೊಬ್ಬೆ ಹಾಕುತ್ತಾರೆ. ಆದರೆ ಇಂತಹ ‘ಡೆಂಗ್ಯೂ ಆರ್ಟಿಸ್ಟ್’ ಗಳನ್ನು ಬೆಂಬಲಿಸುತ್ತಾರೆ. ಅವರು ಸಂಗೀತಕಾರರಾಗಿ ಭಾರತಕ್ಕೆ ಬರುವುದಿಲ್ಲ. ಪಾಕಿಸ್ತಾನದ ‘ದಲ್ಲಾಳಿ’ಗಳಾಗಿ ಬರುತ್ತಿದ್ದಾರೆ” ಎಂದು ಅಭಿಜಿತ್ ಹೀನಾಯವಾಗಿ ವಾಗ್ದಾಳಿ ನಡೆಸಿದ್ದಾರೆ.
 
ಆದರೆ ಬಾಲಿವುಡ್‌ ನಿರ್ಮಾಪಕ ಮಹೇಶ್ ಭಟ್, ನಟಿಶಬಾನಾ ಆಝ್ಮಿ ಸೇರಿದಂತೆ ಹಲವರು ಶಿವಸೇನೆ ಕ್ರಮಕ್ಕೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments