ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ನಾಯಕಿಯೋರ್ವಳು ಪೊಲೀಸ್ ಠಾಣೆಯೊಳಗೆ ಸಬ್- ಇನ್ಸಪೆಕ್ಟರ್ ಒಬ್ಬರನ್ನು ಮನಬಂದಂತೆ ಥಳಿಸಿದ ಆಘಾತಕಾರಿ ಘಟನೆ ಮೀರತ್ನಲ್ಲಿ ನಡೆದಿದೆ. ಆಕೆ ಯಾವ ಪರಿಯಲ್ಲಿ ಥಳಿಸಿದ್ದಾಳೆಂದರೆ ಪೀಡಿತ ಅಧಿಕಾರಿ ಕಾಲಿನ ಮೂಳೆಗೆ ಪೆಟ್ಟಾಗಿದೆ.
ಪೀಡಿತ ಅಧಿಕಾರಿಯನ್ನು ಸರ್ವೇಶ್ ಕುಮಾರ್ ಎಂದು ಗುರುತಿಸಲಾಗಿದ್ದು ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿ ಸಂಗೀತಾ ರಾಹುಲ್ ತನ್ನ ಸಹಚರರೊಂದಿಗೆ ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಅಧಿಕಾರಿಯನ್ನು ಮನಬಂದಂತೆ ಥಳಿಸಿದ್ದಾಳೆ ಎಂದು ತಿಳಿದು ಬಂದಿದೆ. ಕುಡಿದು ಕಾರ್ ಓಡಿಸುತ್ತಿದ್ದ ಆಕೆಯ ಮಗ ಮತ್ತು ಆತನ ಗೆಳೆಯರನ್ನು ಸರ್ವೇಶ್ ಕುಮಾರ್ ಚೆಕ್ ಪಾಯಿಂಟ್ನಲ್ಲಿ ತಡೆದಿದ್ದೇ ಘಟನಗೆ ಕಾರಣ ಎನ್ನಲಾಗುತ್ತಿದೆ.