Webdunia - Bharat's app for daily news and videos

Install App

ದುಸ್ಸಾಹಸಕ್ಕಿಳಿದು ನದಿಯಲ್ಲಿ ಕೊಚ್ಚಿ ಹೋದ ಬೈಕ್ ಸವಾರ

Webdunia
ಗುರುವಾರ, 24 ಜುಲೈ 2014 (08:44 IST)
ದೇಶದ ಕೆಲ ರಾಜ್ಯಗಳಲ್ಲಿ ವರುಣ ಆರ್ಭಟಿಸುತ್ತಿದ್ದು, ಭಾರೀ ಮಳೆಯಾಗುತ್ತಿರುವ ಮಧ್ಯಪ್ರದೇಶದಲ್ಲಿ ಉಕ್ಕೇರಿ ರಸ್ತೆಯ ಮೇಲೆ ಹರಿಯುತ್ತಿದ್ದ ನದಿಯ ನೀರಿನಲ್ಲಿ ಬೈಕ್‌ ಚಲಾಯಿಸಿಕೊಂಡು ಹೋದ ಯುವಕನೊಬ್ಬ ಕೊಚ್ಚಿ ಹೋಗಿರುವ ಕರುಣಾಜನಕ ಘಟನೆ ವರದಿಯಾಗಿದೆ.

ಪ್ರತ್ಯಕ್ಯದರ್ಶಿಗಳೊಬ್ಬರು ಈ ಘಟನೆಯ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದು, ಇದೀಗ  ಅದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. 
 
ತಡೆಗೋಡೆಯಿಲ್ಲದ ಸೇತುವೆಯ ಮೇಲೆ ನದಿ ನೀರು ಹರಿಯುತ್ತಿರುವುದನ್ನು ನೋಡುತ್ತಾ  ಅನೇಕ ಜನ  ನದಿಯ  ಇಕ್ಕೆಲಗಳಲ್ಲಿ ನಿಂತಿದ್ದರು. ಆ ಸಮಯದಲ್ಲಿ ಬೈಕ್ ಮೇಲೆ ಅಲ್ಲಿಗೆ ಬಂದ ಯುವಕ ಸ್ವಲ್ಪ ಸಮಯ ರಸ್ತೆ ಬದಿಯಲ್ಲಿ ಬೈಕ್  ನಿಲ್ಲಿಸಿಕೊಂಡು ನಿಂತಿದ್ದ . ಒಮ್ಮೆಲೆ ಸ್ಟಂಟ್ ಮಾಡೋ ಹುಮ್ಮಸ್ಸಿನಲ್ಲಿ, ನೀರಿನ ಜತೆ ಪೈಪೋಟಿಗಿಳಿದ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ  ಬೈಕ್ ಚಲಾಯಿಸಿದ ಆತ ಎಲ್ಲರೂ ನೋಡುತ್ತಿರುವಂತೆ ನೀರಿನ ಸೆಳೆತದಲ್ಲಿ ಕೊಚ್ಚಿ ಹೋದ. 
 
ಇನ್ನೇನು ಆತ ಆ ಬದಿಗೆ ಮುಟ್ಟಲು ಸ್ವಲ್ಪ ಅಂತರವಿದೆ ಅನ್ನುವಷ್ಟರಲ್ಲಿ ಮೇಲೇರಿ ಬಂದ ನೆರೆ ನೀರು ಆತನನ್ನು ಬೈಕ್‌ ಸಮೇತ ಸೆಳೆದುಕೊಂಡು ಹೋಗುವ ದೃಶ್ಯ ಭಯಾನಕವಾಗಿದೆ.
 
ಆತನ ದುರ್ಮರಣವನ್ನು  ಅಲ್ಲಿ ನಿಂತಿದ್ದ ಜನ ಅಸಹಾಯಕರಾಗಿ ನೋಡುತ್ತಿದ್ದರು. ಆತ ಮದ್ಯದ ಅಮಲಿನಲ್ಲಿ ಆ ದುಸ್ಸಾಹಸಕ್ಕೆ ಕೈ ಹಾಕಿದ ಎಂದು ಹೇಳಲಾಗುತ್ತಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments