ಗೆಳೆಯರು ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಎನ್ನುವ ಶಂಕೆಯಿಂದ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ಮಾಡಿ ಒಬ್ಬನನ್ನು ಹತ್ಯೆಗೈದು ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ನಡೆದಿದೆ.
ನಗರದ ನಯಾಪಲ್ಲಿ ಪ್ರದೇಶದಲ್ಲಿ ಇಬ್ಬರು ಯುವಕರು ತೆರಳುತ್ತಿರುವಾಗ ಅಲ್ಲಿಗೆ ಬಂದ ಆರೋಪಿ ಯುವಕ, ಇಬ್ಬರನ್ನು ಲಾಠಿಯಿಂದ ಥಳಿಸಿ ಒಬ್ಬನನ್ನು ಹತ್ಯೆ ಮಾಡಿದ್ದಲ್ಲದೇ ಮತ್ತೊಬ್ಬನನ್ನು ಗಾಯಗೊಳಿಸಿ ಪರಾರಿಯಾಗಿದ್ದಾನೆ.
ಆರೋಪಿ ಯುವಕ ಸೀಮಾಂಚಲ್ ಜೆನಾನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಘಟನೆಯಲ್ಲಿ ಹತ್ಯೆಯಾದ ವ್ಯಕ್ತಿ ಬಸಂತ್ ಪ್ರಧಾನ್, ಗಾಯಗೊಂಡ ವ್ಯಕ್ತಿ ಲಂಬೋದರ್ ಪ್ರಧಾನ್ ಎಂದು ಗುರುತಿಸಲಾಗಿದೆ.
ಇಬ್ಬರು ಓರಿಸ್ಸಾದ ಗಂಜಾಮ್ ಜಿಲ್ಲೆಯವರಾಗಿದ್ದು, ಸಿಸಿಟಿವಿ ಆದಾರದ ಮೇಲೆ ಆರೋಪಿ ಸೀಮಾಂಚಲ್ ಜೆನಾನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೀಮಾಂಚಲ್ ಜೆನಾ ಮತ್ತು ಆತನ ಪತ್ನಿಯ ಮಧ್ಯದ ಕೌಟಂಬಿಕ ಸಮಸ್ಯೆಗಳಲ್ಲಿ ಇಬ್ಬರು ಗೆಳೆಯರು ಮೂಗು ತೂರಿಸುತ್ತಿದ್ದರು. ಇಬ್ಬರು ಗೆಳೆಯರು ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಎನ್ನುವ ಶಂಕೆಯಿಂದ ಹತ್ಯೆ ಮಾಡಿದ್ದಾಗಿ ಜೆನಾ ಪೊಲೀಸರಿಗೆ ತಿಳಿಸಿದ್ದಾನೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.