Webdunia - Bharat's app for daily news and videos

Install App

ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ ಅಜ್ಮಲ್ ಕಸಬ್‌ನಂತೆ: ಶಿವಸೇನೆ

Webdunia
ಮಂಗಳವಾರ, 13 ಅಕ್ಟೋಬರ್ 2015 (15:33 IST)
ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ ಅಜ್ಮಲ್ ಕಸಬ್‌ನಂತೆ ಪಾಕಿಸ್ತಾನದ ಏಜೆಂಟ್ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
 
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಪುಸ್ತಕ ಬಿಡುಗಡೆಗೆ ಬೆಂಬಲ ಸೂಚಿಸಿದ ಸುಧೀಂದ್ರ ವಿರುದ್ಧ ಶಿವಸೇನೆ ಟೀಕಾಪ್ರಹಾರ ಮುಂದುವರಿಸಿದೆ.
 
ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಖ್ಯಾತ ಪತ್ರಕರ್ತ ಸುಧೀಂದ್ರ ಪಾಕಿಸ್ತಾನದ ಏಜೆಂಟ್‌ನಾಗಿದ್ದು, ಇಂತಹ ವ್ಯಕ್ತಿಗಳು ಭಾರತದಲ್ಲಿರುವವರೆಗೆ ಪಾಕಿಸ್ತಾನಕ್ಕೆ ಅಜ್ಮಲ್ ಕಸಬ್‌ನಂತಹ ವ್ಯಕ್ತಿಗಳನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದೆ.    
 
ಬಿಜೆಪಿ ವಿರುದ್ಧವು ವಾಗ್ದಾಳಿ ನಡೆಸಿದ ಶಿವಸೇನೆ, ಹಣಕ್ಕಾಗಿ ಮತ ಹಗರಣದಲ್ಲಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ವಿವಾದದಲ್ಲೂ ಸುಧೀಂದ್ರ ಪ್ರಮುಖ ರೂವಾರಿಯಾಗಿದ್ದರು ಎಂದು ಆರೋಪಿಸಿದೆ.  
 
ಮುಂಬೈಗೆ ಭೇಟಿ ನೀಡುವ ಪಾಕಿಸ್ತಾನದ ಕಲಾವಿದರು ಮತ್ತು ಕ್ರಿಕೆಟಿಗರ ವಿರುದ್ಧ ಶಿವಸೇನೆ ಸಮರ ಮುಂದುವರಿಸಲಿದೆ. ಪಾಕ್‌ ಬಗ್ಗೆ ಶಿವಸೇನೆಯ ನಿಲುವು ಯಾವತ್ತೂ ಬದಲಾಗುವುದಿಲ್ಲ ಎಂದು ಮುಖಂಡ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments