ಬಿಜೆಪಿ ಸದಸ್ಯ ಸುಧೀಂದ್ರ ಕುಲ್ಕರ್ಣಿ ಅಜ್ಮಲ್ ಕಸಬ್ನಂತೆ ಪಾಕಿಸ್ತಾನದ ಏಜೆಂಟ್ ಎಂದು ಶಿವಸೇನೆ ವಾಗ್ದಾಳಿ ನಡೆಸಿದೆ.
ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಪುಸ್ತಕ ಬಿಡುಗಡೆಗೆ ಬೆಂಬಲ ಸೂಚಿಸಿದ ಸುಧೀಂದ್ರ ವಿರುದ್ಧ ಶಿವಸೇನೆ ಟೀಕಾಪ್ರಹಾರ ಮುಂದುವರಿಸಿದೆ.
ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಖ್ಯಾತ ಪತ್ರಕರ್ತ ಸುಧೀಂದ್ರ ಪಾಕಿಸ್ತಾನದ ಏಜೆಂಟ್ನಾಗಿದ್ದು, ಇಂತಹ ವ್ಯಕ್ತಿಗಳು ಭಾರತದಲ್ಲಿರುವವರೆಗೆ ಪಾಕಿಸ್ತಾನಕ್ಕೆ ಅಜ್ಮಲ್ ಕಸಬ್ನಂತಹ ವ್ಯಕ್ತಿಗಳನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಕಿಡಿಕಾರಿದೆ.
ಬಿಜೆಪಿ ವಿರುದ್ಧವು ವಾಗ್ದಾಳಿ ನಡೆಸಿದ ಶಿವಸೇನೆ, ಹಣಕ್ಕಾಗಿ ಮತ ಹಗರಣದಲ್ಲಿ ಮತ್ತು ಮೊಹಮ್ಮದ್ ಅಲಿ ಜಿನ್ನಾ ವಿವಾದದಲ್ಲೂ ಸುಧೀಂದ್ರ ಪ್ರಮುಖ ರೂವಾರಿಯಾಗಿದ್ದರು ಎಂದು ಆರೋಪಿಸಿದೆ.
ಮುಂಬೈಗೆ ಭೇಟಿ ನೀಡುವ ಪಾಕಿಸ್ತಾನದ ಕಲಾವಿದರು ಮತ್ತು ಕ್ರಿಕೆಟಿಗರ ವಿರುದ್ಧ ಶಿವಸೇನೆ ಸಮರ ಮುಂದುವರಿಸಲಿದೆ. ಪಾಕ್ ಬಗ್ಗೆ ಶಿವಸೇನೆಯ ನಿಲುವು ಯಾವತ್ತೂ ಬದಲಾಗುವುದಿಲ್ಲ ಎಂದು ಮುಖಂಡ ಸಂಜಯ್ ರಾವುತ್ ಸ್ಪಷ್ಟಪಡಿಸಿದ್ದಾರೆ.