Select Your Language

Notifications

webdunia
webdunia
webdunia
webdunia

ರಾಹುಲ್ ಪ್ರಬುದ್ಧರಲ್ಲವೆಂದು ದೇಶಕ್ಕೆ ಗೊತ್ತು: ಬಿಜೆಪಿ

ರಾಹುಲ್ ಪ್ರಬುದ್ಧರಲ್ಲವೆಂದು ದೇಶಕ್ಕೆ ಗೊತ್ತು: ಬಿಜೆಪಿ
ನವದೆಹಲಿ , ಶನಿವಾರ, 25 ಫೆಬ್ರವರಿ 2017 (10:30 IST)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜಕಾರಣದಲ್ಲಿ ಇನ್ನೂ ಪ್ರಬುದ್ಧರಾಗಿಲ್ಲ. ಅವರಿಗೆ ಇನ್ನಷ್ಟು ಸಮಯ ಬೇಕು ಎಂದು ದೆಹಲಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಹುಲ್ ಪ್ರಬುದ್ಧರಲ್ಲ ಎಂಬುದು ದೇಶಕ್ಕೆ ಗೊತ್ತಿದೆ ಎಂದು ವ್ಯಂಗ್ಯವಾಡಿದೆ.
 
ರಾಹುಲ್ ಗಾಂಧಿಯನ್ನು ಅಣಕಿಸಲು ಶೀಲಾ ಅವರ ಹೇಳಿಕೆಯನ್ನು ಬಳಸಿಕೊಂಡಿರುವ ಬಿಜೆಪಿ ರಾಹುಲ್ ಪ್ರಬುದ್ಧರಲ್ಲ ಎಂಬುದು ದೇಶಕ್ಕೆ ಗೊತ್ತಿರುವ ಸತ್ಯ. ತಡವಾಗಿಯಾದರೂ ವಾಸ್ತವಾಂಶವನ್ನು ದೃಢಪಡಿಸಲಾಗಿದೆ ಎಂದಿದೆ. ದೇಶದ ಜನರಿಗೆ ಇದು ಗೊತ್ತಿದೆ. ಆದರೆ ಸತ್ಯವನ್ನು ಖಚಿತಪಡಿಸಿದ್ದಕ್ಕೆ ಶೀಲಾ ಅವರಿಗೆ ಧನ್ಯವಾದಗಳು, ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.
 
ರಾಹುಲ್‌ ಪ್ರಬುದ್ಧರು. ಭಾರತವನ್ನು ಕಾಂಗ್ರೆಸ್‌ ಮುಕ್ತ ಮಾಡುವ ಮಹಾತ್ಮ ಗಾಂಧಿ ಕನಸನ್ನು ಈಡೇರಿಸಲು ಯತ್ನಿಸುತ್ತಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷದ್ ಅಣಕವಾಡಿದೆ.
 
ದಿನಪತ್ರಿಕೆಯೊಂದರ ಜತೆ ಗುರುವಾರ ಮಾತನಾಡುತ್ತಿದ್ದ ಶೀಲಾ ದೀಕ್ಷಿತ್‌ ರಾಹುಲ್‌ ರಾಜಕಾರಣದಲ್ಲಿ ಪ್ರಬುದ್ಧರಾಗಿಲ್ಲ. ಅದಕ್ಕೆ ಅವರಿಗೆ ಇನ್ನಷ್ಟು ಸಮಯ ಬೇಕು ಎಂದಿದ್ದರು.ಬಳಿಕ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಪೋಲ್`ಗೆ ಕೆಟಿಎಂ ಬೈಕ್ ಡಿಕ್ಕಿ: ಸವಾರ ಸಾವು