Webdunia - Bharat's app for daily news and videos

Install App

ಶೀನಾ ಹತ್ಯೆ: ಸುಳಿವು ನೀಡಿದ ಅನಾಮಿಕನ್ಯಾರು?

Webdunia
ಗುರುವಾರ, 3 ಸೆಪ್ಟಂಬರ್ 2015 (10:29 IST)
ಕ್ಷಣಕ್ಷಣಕ್ಕೂ ತಿರುವುಗಳನ್ನು ಪಡೆಯುತ್ತಿರುವ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು ದೂರವಾಣಿ ಕರೆ ಮಾಡಿ ಹತ್ಯೆ ಕುರಿತು ಮೊದಲ ಬಾರಿಗೆ ಸುಳಿವು ನೀಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
 
ಅನಾಮಿಕ ವ್ಯಕ್ತಿಯೊಬ್ಬರು ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರಿಗೆ ದೂರವಾಣಿ  ಕರೆ ಮಾಡಿ ಶೀನಾ ಕೊಲೆಯಾಗಿರುವುದ ಬಗ್ಗೆ ಸುಳಿವು ನೀಡಿದ್ದರು. ಆ ಕರೆ ಉತ್ತರಪ್ರದೇಶದಿಂದ ಬಂದಿದೆಂಬುದನ್ನಷ್ಟೇ ಪೊಲೀಸರು ಕಂಡುಕೊಂಡಿದ್ದು ಕರೆ ಮಾಡಿದ್ದು ಯಾರು ಎಂಬುದು ಇನ್ನುವರೆಗೂ ಪತ್ತೆಯಾಗಿಲ್ಲ. ಆ ವ್ಯಕ್ತಿಯಿಂದ ಮಹತ್ವದ ಸುಳಿವು ಸಿಗಬಹುದೆಂಬ ಕಾರಣಕ್ಕೆ ಪೊಲೀಸರು ಹುಡುಕಾಟ ಕೈಗೊಂಡಿದ್ದು, ಆ ವ್ಯಕ್ತಿ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿರಬೇಕೆಂದು ಪೊಲೀಸರು ಊಹಿಸಿದ್ದಾರೆ. 
 
ಇಷ್ಟು ದಿನ ಶೀನಾ ಬದುಕಿದ್ದಾಳೆ, ಅಮೇರಿಕದಲ್ಲಿದ್ದಾಳೆ ಎಂದು ಹೇಳುವುದರ ಮೂಲಕ ಪೊಲೀಸರನ್ನು ಗೊಂದಲಕ್ಕೀಡು ಮಾಡಿದ್ದ ಇಂದ್ರಾಣಿ ಈಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. 
 
ನಿನ್ನೆ ಇಡೀ ಇಂದ್ರಾಣಿ ಪತಿ ಸ್ಟಾರ್ ಇಂಡಿಯಾದ ಮಾಜಿ ಸಿಇಒ ಪೀಟರ್ ಮುಖರ್ಜಿಯನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇಂದು ಸಹ ಪತ್ನಿ ಮತ್ತು ಇತರ ಆರೋಪಿಗಳ ಸಮ್ಮುಖದಲ್ಲಿ ಪೀಟರ್ ವಿಚಾರಣೆ ಮುಂದುವರೆಯಲಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments