ಶೀನಾ ಬೋರಾ ಪ್ರಕರಣಕ್ಕೆ ಸಂಚಲನ ಮೂಡಿಸುವಂತ ಮತ್ತೊಂದು ಹೊಸ ಟ್ವಿಸ್ ಸಿಕ್ಕಿದೆ. ಅವಳನ್ನು ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿತ್ತು, ಆಗ ನಾನು ಕೂಡ ಆ ಸ್ಥಳದಲ್ಲಿದ್ದೆ ಎಂದು ಇಂದ್ರಾಣಿ ಮುಖರ್ಜಿಯ ಕಾರಿನ ಮಾಜಿ ಚಾಲಕ ಶ್ಯಾಂವರ್ ರೈ ತಪ್ಪೊಪ್ಪಿ ಕೊಂಡಿದ್ದಾನೆ.
ನಾನು ಸತ್ಯವನ್ನು ಹೇಳಲು ಬಯಸುತ್ತಿದ್ದೇನೆ. ನನಗೆ ಪ್ರಕರಣದಲ್ಲಿ ಕ್ಷಮೆ ನೀಡಬೇಕೆಂದು ರೈ ಕಳೆದ ವಾರ ರೈ ನ್ಯಾಯಾಲಯಕ್ಕೆ ಎರಡು ಪುಟಗಳ ಪತ್ರವನ್ನು ಬರೆದಿದ್ದ.
ನಿನ್ನೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಆತ, ವಿಶೇಷ ನ್ಯಾಯಾಧೀಶರಾದ ಹೆಚ್.ಎಸ್ ಮಹಾಜನ್ ರೈ ಕಟಕಟೆಗೆ ಕರೆದಾಗ, ಶೀನಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಯಿತು. ಯಾರೊಬ್ಬರ ಒತ್ತಡ, ಭಯಕ್ಕೆ ಒಳಗಾಗಿ ನಾನು ಸತ್ಯ ಹೇಳುತ್ತಿಲ್ಲ. ಸತ್ಯವನ್ನು ನುಡಿಯಲು ಯಾರೊಬ್ಬರೂ ನನ್ನ ಮೇಲೆ ಒತ್ತಡ ಹೇರಿಲ್ಲ. ನನಗೆ ಪಶ್ಚಾತಾಪವಾಗಿದೆ. ಪ್ರಾಯಶ್ಚಿತ ಮಾಡಿಕೊಳ್ಳಲು ಸತ್ಯ ಹೇಳುತ್ತಿದ್ದೇನೆ. ದಯವಿಟ್ಟು ಪ್ರಕರಣದಲ್ಲಿ ನನಗೆ ಕ್ಷಮೆ ನೀಡಬೇಕೆಂದು ಕೇಳಿಕೊಂಡಿದ್ದಾನೆ.
2012 ಏಪ್ರಿಲ್ 24 ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಆಕೆಯ ತಾಯಿ, ಸ್ಟಾರ್ ಟಿವಿಯ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರ ಪತ್ನಿ ಇಂದ್ರಾಣಿ ಈ ಕೊಲೆಯ ಪ್ರಮುಖ ಆರೋಪಿಯಾಗಿದ್ದಾರೆ. ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಂವರ್ ರೈ ಇತರ ಆರೋಪಿಗಳಾಗಿದ್ದಾರೆ. ಇಂದ್ರಾಣಿ ಸದ್ಯದ ಪತಿ ಪೀಟರ್ ಮುಖರ್ಜಿ ಸಹ ಆರೋಪವನ್ನೆದುರಿಸುತ್ತಿದ್ದು ನಾಲ್ವರು ಸಹ ನ್ಯಾಯಾಂಗ ಬಂಧನದಲ್ಲಿದ್ದಾರೆ.