Select Your Language

Notifications

webdunia
webdunia
webdunia
webdunia

ನೋಡಲು ಚೆನ್ನಾಗಿಲ್ಲವೆಂದು ಅವಮಾನಿಸಿದ್ದಕ್ಕೆ ಟೆಕ್ಕಿ ಸ್ವಾತಿ ಕೊಲೆ

ನೋಡಲು ಚೆನ್ನಾಗಿಲ್ಲವೆಂದು ಅವಮಾನಿಸಿದ್ದಕ್ಕೆ ಟೆಕ್ಕಿ ಸ್ವಾತಿ ಕೊಲೆ
ಚೆನ್ನೈ , ಸೋಮವಾರ, 4 ಜುಲೈ 2016 (12:50 IST)
ತಾನು ಚೆನ್ನಾಗಿಲ್ಲವೆಂದು ಸಾರ್ವಜನಿಕವಾಗಿ ಅವಮಾನ ಮಾಡಿದ್ದಕ್ಕೆ ಟೆಕ್ಕಿ ಸ್ವಾತಿಯನ್ನು ಕೊಲೆಗೈದಿರುವುದಾಗಿ ಆರೋಪಿ ರಮೇಶ್ ಕುಮಾರ್ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
ಆರೋಪಿಯನ್ನು ಬಂಧಿಸಿದ ಎರಡು ದಿನಗಳ ಬಳಿಕ ಭಾನುವಾರ ತಿರುನಲ್ವೇಲಿಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ರಾಮ್ ಕುಮಾರ್ ಹೇಳಿಕೆಯನ್ನು ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಎಂ.ರಾಮದಾಸ್ ದಾಖಲಿಸಿಕೊಂಡಿದ್ದಾರೆ.
 
ನನ್ನನ್ನು ಪ್ರೀತಿಸುವಂತೆ ಮೂರು ಬಾರಿ ಮೂರು ಪ್ರತ್ಯೇಕ ಪ್ರದೇಶಗಳಲ್ಲಿ ಸ್ವಾತಿ ಬಳಿ ನಿವೇದಿಸಿಕೊಂಡಿದ್ದೆ. ನುಂಗಂಬಾಕಂನಲ್ಲಿ ಒಮ್ಮೆ ಪ್ರೇಮ ನಿವೇದನೆ ಮಾಡಿಕೊಂಡಾಗ ಆಕೆ ಸಾರ್ವಜನಿಕರ ಎದುರೇ ನೀನು ನೋಡಲು ಚೆನ್ನಾಗಿಲ್ಲವೆಂದು ಅವಮಾನಿಸಿದ್ದಳು. ಅದಕ್ಕೂ ಮೊದಲು ಸಲ ಎರಡು ಬಾರಿ ನನ್ನ ರೂಪದ ಬಗ್ಗೆ ಕೆಟ್ಟದಾಗಿ ಕಿಚಾಯಿಸಿದ್ದಳು. ಈ ಮೂರು ಭೇಟಿ ಆಕೆಯನ್ನು ಕೊಲ್ಲುವಂತೆ ಪ್ರೇರೇಪಿಸಿದವು. ಆಕೆಯ ಚಲನವಲನವನ್ನು ಗಮನಿಸಿಕೊಂಡು ಈ ಕೃತ್ಯವನ್ನೆಸಗಿದ್ದೇನೆ ಎಂದಾತ  ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಆರೋಪಿಯನ್ನು ಆಂಬ್ಯುಲೆನ್ಸ್‌ನಲ್ಲಿ ಇಂದು ಚೆನ್ನೈಗೆ ಕೋರ್ಟ್ ತರಲಾಗುತ್ತಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಧಾರ್ಮಿಕ ತಾರತಮ್ಯವಿಲ್ಲ: ಸಂಸದ ಶ್ರೀರಾಮುಲು