Select Your Language

Notifications

webdunia
webdunia
webdunia
webdunia

ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ ತಳ್ಳಿಹಾಕಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ

ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ ತಳ್ಳಿಹಾಕಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ
ಪಾಟ್ನಾ , ಗುರುವಾರ, 26 ನವೆಂಬರ್ 2015 (17:15 IST)
ಬಾಲಿವುಡ್ ನಟ ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆಯನ್ನು ತಳ್ಳಿಹಾಕಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ , ದೇಶ ಶಾಂತಿ ನೆಮ್ಮದಿಯ ತಾಣವಾಗಿದೆ ಎಂದು ಹೇಳಿದ್ದಾರೆ. 
 
ಅಮೀರ್ ಖಾನ್ ಮತ್ತು ಅವರ ಕುಟುಂಬದ ಬಗ್ಗೆ ನನಗೆ ಗೌರವವಿದೆ. ಆದರೆ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಹೇಳಿಕೆಯನ್ನು ಒಪ್ಪುವುದಿಲ್ಲ. ಇತರರು ಕೂಡಾ ಒಪ್ಪುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
 
ಒಂದು ವೇಳೆ, ಭಾರತ ಅಸಹಿಷ್ಣುತೆ ದೇಶವಾಗಿದ್ದಲ್ಲಿ ಪಿಕೆ ಚಿತ್ರದಲ್ಲಿ ಹಿಂದೂ ದೇವರುಗಳನ್ನು ತಮಾಷೆ ಮಾಡುವಂತಹ ದೃಶ್ಯಗಳಿದ್ದರೂ ಸೂಪರ್ ಹಿಟ್ ಆಗುತ್ತಿರಲಿಲ್ಲ ಎನ್ನುವುದು ಅಮೀರ್ ಖಾನ್‌ ತಿಳಿಯಬೇಕು ಎಂದರು.
 
ನಮ್ಮ ತಾಯ್ನಾಡು ದೇಶವಾದ ಭಾರತ ಜಾತ್ಯಾತೀತವಾಗಿದ್ದು, ಪ್ರತಿಯೊಂದು ಧರ್ಮ, ಜಾತಿ, ಕೋಮು ಸಾಮರಸ್ಯತೆಯ ಪ್ರತೀಕವಾಗಿದೆ ಎಂದು ತಿಳಿಸಿದ್ದಾರೆ. 
 
ಬಾಲಿವುಡ್ ನಟ ಅಮೀರ್ ಖಾನ್ ಅಸಹಿಷ್ಣುತೆ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಬಾಲಿವುಡ್ ನಟ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ.

Share this Story:

Follow Webdunia kannada