Webdunia - Bharat's app for daily news and videos

Install App

ಒಬಾಮಾರಿಗೆ ಚಹಾ ಕುಡಿಸಿ ಮೋದಿ ದೇಶಕ್ಕೆ ಅಪಮಾನ ಮಾಡಿದ್ದಾರೆ !

Webdunia
ಶುಕ್ರವಾರ, 30 ಜನವರಿ 2015 (12:48 IST)
ಸದಾ ಶಿರಡಿ ಸಾಯಿಬಾಬಾರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡುವ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಈಗ ಪ್ರಧಾನಿ ಮೋದಿ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾರಿಗೆ ಚಹಾ ಮಾಡಿ ಕುಡಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. 
ಗುರುವಾರ  ಬಾಲಾಜಿಪುರಂನಲ್ಲಿ ಆಯೋಜಿಸಲಾಗಿದ್ದ ಧರ್ಮ ಸಂಸದ್ ಸಭೆ ಸಂದರ್ಭದಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಶಂಕರಾಚಾರ್ಯರು, "ಬಾಲ್ಯದಲ್ಲಿ ಮೋದಿ ಬಡವರಾಗಿದ್ದಿರಬಹುದು ಮತ್ತು ಟೀ ಮಾರುತ್ತಿದ್ದಿರಬಹುದು. ಆದರೆ ಈಗ ಪ್ರಧಾನಿಯಾಗಿರುವು ಅವರು ತಾವೇ ಭಾರತವೆನಿಸುತ್ತಾರೆ ಮತ್ತು ಒಬಾಮಾ ಒಬ್ಬ ಅಮೇರಿಕನ್. ಒಬಾಮಾರಿಗೆ ಚಹಾ ಮಾಡಿ ಕುಡಿಸುವಷ್ಟು ಬಡ ದೇಶ ಭಾರತವಲ್ಲ , ಇದು ನಮ್ಮ ದೇಶಕ್ಕಾದ ಅವಮಾನ", ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  
 
ಸಾಯಿಬಾಬಾರವರ ಕುರಿತು ಮಾತನಾಡಿದ ಶಂಕರಾಚಾರ್ಯ ಅವರು "ದೇವರು ಅಲ್ಲ, ಸಂತನೂ ಅಲ್ಲ , ಗುರುವೂ ಅಲ್ಲ. ಆದ್ದರಿಂದ ಅವರನ್ನು ಪೂಜಿಸಬೇಡಿ. ಆಗ ಮಾತ್ರ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ", ಎಂದರು. 
 
ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ತೋರಿಸುವ ಸಿನಿಮಾಗಳಿಗೆ  ಸೆನ್ಸಾರ್ ಬೋರ್ಡ್ ಅನುಮತಿ ನೀಡಬಾರದು ಎಂದು ಅವರು ಆಗ್ರಹಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments