Webdunia - Bharat's app for daily news and videos

Install App

ಚೆನ್ನೈ ಮಹಾಪ್ರಳಯ: 1 ಕೋಟಿ ದೇಣಿಗೆ ನೀಡಿದ ಶಾರುಖ್

Webdunia
ಮಂಗಳವಾರ, 8 ಡಿಸೆಂಬರ್ 2015 (12:56 IST)
ಶತಮಾನದ ಮಹಾಮಳೆಗೆ ಸಿಲುಕಿ ನರಳಿದ ಚೆನ್ನೈ  ಮಹಾನಗರ ಸಹಜ ಸ್ಥಿತಿಗೆ ಮರಳುತ್ತಿದ್ದು ದೇಶದೆಲ್ಲೆಡೆಗಳಿಂದ ನೆರವಿನ ಮಹಾಪುರ ಹರಿದು ಬರುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಕೂಡಾ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ ಘೋಷಿಸಿದ್ದಾರೆ.

ಕುಡಿಯುವ ನೀರು, ಆಹಾರ ಹಾಗೂ ವಿದ್ಯುತ್‌ಗಾಗಿ ಪರದಾಡುತ್ತಿರುವ ಪ್ರವಾಹ ಪೀಡಿತ ಜನತೆಯ ನೆರವಿಗೆ ಶಾರುಖ್‌ ಸಹಾಯ ಹಸ್ತ ಚಾಚಿದ್ದಾರೆ. ಶಾರುಕ್‌ ಅಷ್ಟೇ ಅಲ್ಲದೆ  ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ  ಸೇರಿದಂತೆ ಇನ್ನೂ ಹಲವಾರು ನಟರು, ಪ್ರಖ್ಯಾತ ಕ್ರೀಡಾಪಟುಗಳಾದ ಸೈನಾ ನೆಹ್ವಾಲ್, ದೀಪಿಕಾ ಪಳ್ಳಿಕಲ್ ಸಹ ಸಂತ್ರಸ್ತರ ನೆರವಿಗೆ ಮುಂದೆ ಬಂದಿದ್ದಾರೆ.

50ರ ಹರೆಯದ 'ಚೆನ್ನೈಎಕ್ಸಪ್ರೆಸ್ ' ಸ್ಟಾರ್  ಬಾಲಿವುಡ್ ನಟ ಶಾರುಖ್ ಖಾನ್ 1 ಕೋಟಿ ರೂ. ಪರಿಹಾರ ನೀಡಿದ್ದಾರೆ. ಡಿ.18ರಂದು ಬಿಡುಗಡೆಯಾಗಲಿರುವ ಶಾರುಖ್ ಚಿತ್ರ ದಿಲ್​ವಾಲೆಯ ಮೊದಲ ದಿನದ ಕಲೆಕ್ಷನ್ ಅನ್ನು ಕೂಡಾ ತಮಿಳುನಾಡಿಗೆ ನೀಡಲಿದ್ದಾರೆ ಎನ್ನಲಾಗಿದೆ.ಶಾರುಖ್ ತಮಿಳುನಾಡು ಮುಖ್ಯಮಂತ್ರಿಗೆ ಪತ್ರವೊಂದನ್ನು ಸಹ ಬರೆದಿದ್ದಾರೆ ಎಂದು ತಮಿಳುನಾಡಿನ ಮ್ಯಾಗಜಿನ್ ಸಿನಿಮಾ ವಿಕಟನ್​ನಲ್ಲಿ ವರದಿಯಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments