ದೇಶದ ಅಭಿವೃದ್ಧಿಗೆ ಹಿರಿಯ ನಾಗರಿಕರು ಅಡ್ಡಿಯಾಗಿದ್ದಾರೆ ಎಂದು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ನೀಡಿರುವ ಹೇಳಿಕೆ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರಿಕರ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
ಕಾಶಿ ವಿದ್ಯಾಪೀಠ ಪದವಿ ಪ್ರಮಾಣ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಮ್ ನಾಯಕ್, ಕೇಂದ್ರ ಸರಕಾರ ಎಷ್ಟು ವರ್ಷಗಳವರೆಗೆ ಹಿರಿಯ ನಾಗರಿಕರಿಗೆ ಪಿಂಚಣಿ ಕೊಡಲು ಸಾಧ್ಯ ಎಂದು ಕಿಡಿಕಾರಿದರು.
ಗಮನಾರ್ಹ ವಿಷಯವೆಂದರೆ, 81 ವರ್ಷ ವಯಸ್ಸಿನ ರಾಜ್ಯಪಾಲ ರಾಮ್ ನಾಯಕ್ ಕೂಡಾ ಹಿರಿಯ ನಾಗರಿಕರಾಗಿದ್ದಾರೆ.